ಚಿಟ್ಪಾಡಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿ ನೇ#ಣುಬಿಗಿದು ಆ#ತ್ಮ#ಹ#ತ್ಯೆ: ಕಾರಣ ನಿಗೂಢ



ಉಡುಪಿ (Headlines Kannada): ಉಡುಪಿ ಚಿಟ್ಪಾಡಿ ಜಗನ್ನಾಥ ಕಂಪೌಂಡ್ ಬಳಿಯ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಅಡಿಗೆ ಕೋಣೆಯ ಮಾಡಿನ ಜಂತಿಗೆ ನೇ#ಣು#ಬಿಗಿದು ಆ#ತ್ಮ#ಹ#ತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಮೃ#ತ ವ್ಯಕ್ತಿಯನ್ನು 52ವರ್ಷದ ದಿನೇಶ್ ರಾವ್ ಎಂದು ಗುರುತಿಸಲಾಗಿದೆ. ಆ#ತ್ಮ#ಹ#ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರೊಬೇಷನರಿ ಎಸ್.ಐ ನಿರಂಜನ್, ಎ.ಎಸ್.ಐ ನಾರಾಯಣ,  ಹೆಡ್ ಕಾನ್ ಸ್ಟೇಬಲ್ ಹರೀಶ್ ನಾಯ್ಕ್, ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು, ನಗರ ಸಭೆ ಸದಸ್ಯ ವಿಜಯ ಪೂಜಾರಿ ಇಲಾಖೆಗೆ ಸಹಕರಿಸಿದರು