![ದುಬೈ ಮಳೆ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡಕ್ಕೆ ಸಾಥ್ ನೀಡಿದ ಗಲ್ಫ್ ಕರ್ನಾಟಕ ಕುಟುಂಬ ದುಬೈ ಮಳೆ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡಕ್ಕೆ ಸಾಥ್ ನೀಡಿದ ಗಲ್ಫ್ ಕರ್ನಾಟಕ ಕುಟುಂಬ](https://blogger.googleusercontent.com/img/b/R29vZ2xl/AVvXsEju82-02Z1DpV6yjKOXLzOBy4tblCePTPkKQMFxMyXIc9LY2ibhIlWqfWA9DWkgwCpA9zFhQJxkDmTReaAYg6LSZQgbSs9T6zPimmxhsx4Vt1JHb8L_yRrjIZePBANleCjNfofZ3Vkt8qgkNDWJ7Wc7WKQnVuAglulTF4JpgtsfgWZLXe1JpEdIB2vvo8TG/w640-h480/2.jpg)
ದುಬೈ ಮಳೆ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡಕ್ಕೆ ಸಾಥ್ ನೀಡಿದ ಗಲ್ಫ್ ಕರ್ನಾಟಕ ಕುಟುಂಬ
Sunday, April 21, 2024
ದುಬೈ: ಯುಎಇ ಇತಿಹಾಸದಲ್ಲೇ ಎ.16ರಂದು ಅತೀ ಹೆಚ್ಚಿನ ಮಳೆ ಸುರಿದು ಸೃಷ್ಟಿಯಾದ ನೆರೆಯಿಂದ ಶಾರ್ಜಾ ಮತ್ತು ದುಬೈನ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ವೇಳೆ ಜನರಿಗೆ ಊಟ, ನೀರು ಔಷಧಿಯ ಸಮಸ್ಯೆ ಎದುರಾಗಿರುವುದು ಮನಗಂಡು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ನೆರವಿನ ಕಾರ್ಯಾಚರಣೆ ನಡೆಸಿದೆ.
ನಮ್ಮ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡಕ್ಕೆ ನಮ್ಮ ಗಲ್ಫ್ ಕರ್ನಾಟಕ ಕುಟುಂಬ (ಗಲ್ಫ್ ಗೆಳೆಯರು & ಗೆಳತಿಯರು) ವತಿಯಿಂದ ಭಾನುವಾರ 200 ಬಿರಿಯಾನಿ ಮತ್ತು ಕುಡಿಯುವ ನೀರಿನ ಬಾಟಲ್ ಅನ್ನು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡಕ್ಕೆ ಗಲ್ಫ್ ಗೆಳೆಯರು ಬಳಗ ದ ತಂಡ ದವರು ತಲುಪಿಸಿದರು