![ಕೋಟೇಶ್ವರದಲ್ಲಿ ಜಯಪ್ರಕಾಶ್ ಹೆಗ್ಡೆ ಭರ್ಜರಿ ಚುನಾವಣಾ ಪ್ರಚಾರ; ಹಲವು ನಾಯಕರು ಭಾಗಿ ಕೋಟೇಶ್ವರದಲ್ಲಿ ಜಯಪ್ರಕಾಶ್ ಹೆಗ್ಡೆ ಭರ್ಜರಿ ಚುನಾವಣಾ ಪ್ರಚಾರ; ಹಲವು ನಾಯಕರು ಭಾಗಿ](https://blogger.googleusercontent.com/img/b/R29vZ2xl/AVvXsEiiH90SDunOrH_KlpXLSKeIiDLSjSv3xjyDFr2oZ5auHbXHNW5oxjCdQMZzmJhEgifYxxAuW0cRcR_YM0a3kCxoj2ke6kFcuLbKefgo2qYRreacpVG8GDEp-9tyyQ-9Hl8qdICOM81oucLOExYSrP1C0ITMYpfhSlUsSFkvQCZPCu708IBjIsD7b3-Kispn/w640-h480/4.jpg)
ಕೋಟೇಶ್ವರದಲ್ಲಿ ಜಯಪ್ರಕಾಶ್ ಹೆಗ್ಡೆ ಭರ್ಜರಿ ಚುನಾವಣಾ ಪ್ರಚಾರ; ಹಲವು ನಾಯಕರು ಭಾಗಿ
Wednesday, April 17, 2024
ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಭಾಗವಹಿಸಿದ್ದರು.
ಬಿಜೆಪಿ ಸಂಸದರಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಯಾವುದೇ ರೀತಿಯಲ್ಲೂ ಅಭಿವೃದ್ಧಿಯ ಕಂಡಿಲ್ಲ. ಕೇವಲ ಅಧಿಕಾರವನ್ನಷ್ಟೇ ಈ ಹಿಂದಿನ ಸಂಸದರು ಅನುಭವಿಸಿದ್ದಾರೆ. ಈ ಬಾರಿ ಜನಪರ ಅಭಿವೃದ್ಧಿಗೆ ಜಯಪ್ರಕಾಶ್ ಹೆಗ್ಡೆ ಅವರನ್ನು ಹೆಚ್ಚಿನ ಮತ ನೀಡಿ ಗೆಲ್ಲಿಸುವಂತೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಭಂಡಾರಿ, ನಿಕೇತ್ ರಾಜ್ ಮೌರ್ಯ, ಸುಧೀರ್ ಕುಮಾರ್ ಮರೋಳಿ, ಎಂ.ಎ.ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್ ಸೇರಿದಂತೆ ಹಲವರು ಹಾಜರಿದ್ದರು.