![ಮಹಿಳೆ ಅಪಹರಣ ಪ್ರಕರಣ; ರೇವಣ್ಣರನ್ನು 4 ದಿನ ಎಸ್ಐಟಿ ಕಸ್ಟಡಿಗೆ ನೀಡಿದ ನ್ಯಾಯಾಲಯ! ಮಹಿಳೆ ಅಪಹರಣ ಪ್ರಕರಣ; ರೇವಣ್ಣರನ್ನು 4 ದಿನ ಎಸ್ಐಟಿ ಕಸ್ಟಡಿಗೆ ನೀಡಿದ ನ್ಯಾಯಾಲಯ!](https://blogger.googleusercontent.com/img/b/R29vZ2xl/AVvXsEj2y9SMNF61HlbsYH1qf7pTvDeCmPMfOk0lFaBIiPZitlmJpVjBYjITJEJcIGAGiF-Vh3Gq7LcHtYUpNCDjIEvJD0srbwoOQ4JWoyFRb_6dbDPRj9TkkHTbhTizPgeyTdNZbTTCA_YH1fly17RhSTS0mun8KQIz5nJX5HM5fB4GCgGHb5P6JvauYXI9zlmD/w640-h426/HD%20Revanna.jpg)
ಮಹಿಳೆ ಅಪಹರಣ ಪ್ರಕರಣ; ರೇವಣ್ಣರನ್ನು 4 ದಿನ ಎಸ್ಐಟಿ ಕಸ್ಟಡಿಗೆ ನೀಡಿದ ನ್ಯಾಯಾಲಯ!
Sunday, May 5, 2024
ಬೆಂಗಳೂರು: ಮನೆಗೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರನ್ನು 4 ದಿನ ಎಸ್ಐಟಿ ವಶಕ್ಕೆ ನೀಡಿ 17ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಬಂಧಿತ ರೇವಣ್ಣ ಅವರನ್ನು ಕೋರಮಂಗಲದಲ್ಲಿರುವ ನ್ಯಾಯಾಧೀಶ ರವೀಂದ್ರ ಕಟ್ಟಿಮನಿ ಅವರ ಎದುರು ಹಾಜರುಪಡಿಸಲಾಯಿತು. ‘ಹೆಚ್ಚಿನ ವಿಚಾರಣೆ ಅಗತ್ಯವಿದೆ. ಆರೋಪಿಯನ್ನು ಕಸ್ಟಡಿಗೆ ನೀಡಿ’ ಎಂದು ಅಧಿಕಾರಿಗಳ ಪರ ವಕೀಲ ಕೋರಿದರು.
ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ರೇವಣ್ಣ ಅವರನ್ನು ಮೇ 8ರವರೆಗೆ ಕಸ್ಟಡಿಗೆ ನೀಡಿ ಆದೇಶಿಸಿದರು.
ರೇವಣ್ಣ ಕಸ್ಟಡಿಗೆ ಸಿಗುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು, ಅವರನ್ನು ಪೊಲೀಸ್ ವಾಹನದಲ್ಲಿ ಕಚೇರಿಗೆ ಕರೆದೊಯ್ದರು.