ಶಿಕ್ಷಕರ-ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ: ಕಾಟಿಪಳ್ಳ-ಕೃಷ್ಣಾಪುರದಲ್ಲಿ ಮತಯಾಚನೆ ನಡೆಸಿದ ಇನಾಯತ್ ಅಲಿ

ಸುರತ್ಕಲ್: ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಅಂಗವಾಗಿ ಕಾಟಿಪಳ್ಳ ಪೂರ್ವ 3ನೇ ವಾರ್ಡ್ ಹಾಗೂ ಕೃಷ್ಣಾಪುರ 4ನೇ ವಾರ್ಡ್‌ನಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಸಿಬ್ಬಂದಿಗಳೊಂದಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಿದರು.