ಇಮ್ರಾನ್ ಪ್ರತಾಪ್ಗಢಿ ಹುಟ್ಟುಹಬ್ಬ; ಕಾರ್ಕಳದ ಸುರಕ್ಷಾ ಸೇವಾಶ್ರಮಕ್ಕೆ ದಿನಸಿ ವಸ್ತುಗಳನ್ನು ವಿತರಿಸಿ ಆಚರಣೆ ಮಾಡಿದ ಶೇಕ್ ವಾಹಿದ್
Thursday, August 7, 2025
ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಪ್ರತಾಪ್'ಗಢಿ ಅವರ ಹುಟ್ಟುಹಬ್ಬವನ್ನು ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಶೇಕ್ ವಾಹಿದ್ ದಾವೂದ್ ಅವರು ಕಾರ್ಕಳದ ಸುರಕ್ಷಾ ಸೇವಾಶ್ರಮಕ್ಕೆ ದಿನಸಿ ವಸ್ತುಗಳನ್ನು ವಿತರಣೆ ಮಾಡುವುದರ ಮೂಲಕವಾಗಿ ಆಚರಿಸಿದರು. ಈ ವೇಳೆ ಅವರೊಂದಿಗೆ ಮೌಲಾನಾ ಅಬ್ದುಲ್ ಹಫೀಜ್ ಕಾರ್ಕಳ, ಅಬ್ಬಾಸ್ ಸಾಹೇಬ್ ಕಾರ್ಕಳ ಹಾಗು ಉದ್ಯಮಿ ಮೊಹಮ್ಮದ್ ಸಾದಿಕ್ ಉಡುಪಿ ಉಪಸ್ಥಿತರಿದ್ದರು.




