
ನಿರಾಣಿ ವಿರುದ್ಧ ಹೇಳಿಕೆ ನೀಡಿರುವ ಯತ್ನಾಳ್'ಗೆ ಮುಖ್ಯಮಂತ್ರಿ ಬೊಮ್ಮಾಯಿ ಕೊಟ್ಟ ಎಚ್ಚರಿಕೆ ಏನು?
Saturday, January 14, 2023
ಬೆಂಗಳೂರು(Headlineskannada): ಸಚಿವ ಮುರುಗೇಶ್ ನಿರಾಣಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡುತ್ತಿರುವ ಆರೋಪ, ಹೇಳಿಕೆಗಳಿಗೆ ಆಕ್ರೋಶ ಹೊರಹಾಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿಯಾ ಅವರು, ಎಲ್ಲರೂ ಅವರವರ ರಾಜಕೀಯ, ಸಾರ್ವಜನಿಕ ಜೀವನದಲ್ಲಿ ಜನಮನ್ನಣೆ ಪಡೆದುಕೊಂಡು ಬಂದವರೇ. ವೈಯಕ್ತಿಕ ನಿಂ#ದನೆ ಮಾಡೋದು ನಮ್ಮ ರಾಜ್ಯದ ಸಂಸ್ಕೃತಿ ಅಲ್ಲ. ಕೆಲವು ದಿನಗಳಿಂದ ಯತ್ನಾಳ್ ಅವರು ಇದನ್ನೆಲ್ಲ ಹೊರತಾಗಿ ಹೇಳಿಕೆ ನೀಡುತ್ತಿದ್ದಾರೆ. ಅವರ ಮಾತು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ನಿನ್ನೆ ನಿರಾಣಿ ಒಬ್ಬ ಪಿಂ#ಪ್ ಅಂತ ಯತ್ನಾಳ್ ಆರೋಪಿಸಿದ್ದರು. ಯತ್ನಾಳ್ ಹೇಳಿಕೆಗೆ ಸಿಎಂ ಪ್ರತಿಕ್ರಿಯಿಸಿ, ಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ಮಾತನಾಡ್ತಿರೋ ಯತ್ನಾಳ್ ಇನ್ನಾದರೂ ಮಾತನಾದುದನ್ನು ನಿಲ್ಲಿಸಲಿ ಎಂದಿದ್ದಾರೆ.