![ಇಂದ್ರಾಳಿ: ರೈಲ್ವೆ ಸೇತುವೆ ಬಳಿ ಅಪಘಾತ ವಲಯ ನಿರ್ಮಾಣ; ದುರಸ್ತಿಗೆ ಆಗ್ರಹ ಇಂದ್ರಾಳಿ: ರೈಲ್ವೆ ಸೇತುವೆ ಬಳಿ ಅಪಘಾತ ವಲಯ ನಿರ್ಮಾಣ; ದುರಸ್ತಿಗೆ ಆಗ್ರಹ](https://blogger.googleusercontent.com/img/b/R29vZ2xl/AVvXsEh0clqtMUduVVOkgozh-31apyYXogdkxugu8TCTeffywyplb1LleFKhKcPBZu7FpL8hLIPczLDGLp5TKQ5_v7LTaYN7GdOk1KIv3YVF6x6VuyILOZFKwRo0HjHzN_wYHcYbEKaA71HFk2DiW-IPluFQaq6e-fDkX2rdQkjPbvMgH-acxCkAJgBJ9bdq9_sw/w640-h338/2.jpg)
ಇಂದ್ರಾಳಿ: ರೈಲ್ವೆ ಸೇತುವೆ ಬಳಿ ಅಪಘಾತ ವಲಯ ನಿರ್ಮಾಣ; ದುರಸ್ತಿಗೆ ಆಗ್ರಹ
Tuesday, March 19, 2024
ಉಡುಪಿ: ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ವಾಹನದ ದಟ್ಟಣಿ ನಿಯಂತ್ರಿಸಲು ತಾತ್ಕಾಲಿಕ ಡಿವೈಡರ್ ನಿರ್ಮಿಸಲಾಗಿದೆ.
ಸಿಮೆಂಟಿನ ಗಟ್ಟಿಗಳನ್ನು ಇಟ್ಟು ಡೈವಡರ್ ನಿರ್ಮಿಸಲಾಗಿದ್ದು, ಇದೀಗ ಈ ಗಟ್ಟಿಗಳೆಲ್ಲವೂ ಅಡ್ಡಾದಿಡ್ಡಿ ಹರಡಿಕೊಂಡಿವೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಪಘಾತಕ್ಕೂ ಕಾರಣವಾಗಿದೆ. ಹೀಗಾಗಿ ಸಂಬಂಧಪಟ್ಟವರು ತಕ್ಷಣ ಸಮಸ್ಯೆ ಪರಿಹರಿಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಆಗ್ರಹಿಸಿದ್ದಾರೆ.