![ಮೋದಿ 3ನೇ ಬಾರಿ ಪ್ರಧಾನ ಮಂತ್ರಿಯಾಗಿ ಮಾಡುವ ಸಂಕಲ್ಪಕ್ಕೆ ಉಡುಪಿ ಕೃಷ್ಣಮಠದಲ್ಲಿ ಚಾಲನೆ ಮೋದಿ 3ನೇ ಬಾರಿ ಪ್ರಧಾನ ಮಂತ್ರಿಯಾಗಿ ಮಾಡುವ ಸಂಕಲ್ಪಕ್ಕೆ ಉಡುಪಿ ಕೃಷ್ಣಮಠದಲ್ಲಿ ಚಾಲನೆ](https://blogger.googleusercontent.com/img/b/R29vZ2xl/AVvXsEgTYBzBdbiXZ75H5qGViiRoveYPJnAfki8XX8JRKzmvARgo3fwanPphF7_bCiwsLMAGCZBtSIVT-dGoXIl6z5aHNywsGMwbitvcRlddxzq2OMBFm8stzw4C5vA-MEr_hogkkQfQPGGMi72YWxuPa639-auTHCbsGLLYLrZ47HDj9vNuH6ZORsHvFN9fWfRu/w640-h372/6.jpg)
ಮೋದಿ 3ನೇ ಬಾರಿ ಪ್ರಧಾನ ಮಂತ್ರಿಯಾಗಿ ಮಾಡುವ ಸಂಕಲ್ಪಕ್ಕೆ ಉಡುಪಿ ಕೃಷ್ಣಮಠದಲ್ಲಿ ಚಾಲನೆ
Thursday, March 28, 2024
ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗೆಲುವಿಗಾಗಿ ವಿಶ್ವ ಪರ್ಯಾಯದ ಪೀಠಾಧಿಪತಿಗಳಾದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಮತದಾರರಿಗೆ ಕೋಟಿಗೀತೆ ಬರೆದು ನರೇಂದ್ರ ಮೋದಿಯವರನ್ನು 3ನೇ ಬಾರಿ ಪ್ರಧಾನ ಮಂತ್ರಿಯಾಗಿ ಮಾಡುವ ಸಂಕಲ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.