ಸೆ.14-15ರಂದು  ಉಡುಪಿ ತುಳುನಾಡ ಟೈಗರ್ಸ್ ತಂಡದ 5ನೇ ವರ್ಷದ ಹುಲಿವೇಷ ಕುಣಿತ; ಆಮಂತ್ರಣ ಪತ್ರಿಕೆ ಬಿಡುಗಡೆ

ಸೆ.14-15ರಂದು ಉಡುಪಿ ತುಳುನಾಡ ಟೈಗರ್ಸ್ ತಂಡದ 5ನೇ ವರ್ಷದ ಹುಲಿವೇಷ ಕುಣಿತ; ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತುಳುನಾಡ ಟೈಗರ್ಸ್ ಉಡುಪಿ ಇದರ ಆಶ್ರಯದಲ್ಲಿ ರಾಜೇಶ್ ಸುವರ್ಣ ಅವರ ನೇತೃತ್ವದಲ್ಲಿ 5ನೇ ವರ್ಷದ ಹುಲಿವೇಷ ಕುಣಿತ ಸೆ.14 ಮತ್ತು 15ರಂದು ನಿಟ್ಟೂರು ತಾಂಗದಗಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ. ಈ ಹುಲಿವೇಷ ಕುಣಿತದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಅಂಬಲಪಾಡಿ ಶ್ರೀ ಮಹಾಕಾಳಿ ಜನಾರ್ದನ ದೇವಸ್ಥಾನದಲ್ಲಿ ಶುಕ್ರವಾರ ನಡೆಯಿತು. 

ಈ ಸಂದರ್ಭದಲ್ಲಿ ಮದನ್ ಮಣಿಪಾಲ, ಪ್ರಸನ್ನ ಮೆಸ್ಕಾಂ ಮಣಿಪಾಲ, ಮಂಜುನಾಥ್, ದಿವಾಕರ್ ಪೂಜಾರಿ, ಹರೀಶ್ ಕಕ್ಕುಂಜೆ, ಜಯಂತ್ ಸುವರ್ಣ, ಶೇಖರ್ ಪ್ರಗತಿನಗರ, ರಾಜೇಶ್ ಸುವರ್ಣ, ಅಕ್ಷಯ್ ಕೋಟ್ಯಾನ್, ನಂದೀಶ್, ರಝಿಕ್ ಇಂದಿರಾನಗರ, ಪ್ರಸನ್ನ ಆಚಾರ್ಯ, ಸುನಿಲ್ ಅಂಬಾಗಿಲು, ಸಂದೀಪ್, ಮನೋಜ್ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article