
ಸಂಘಪರಿವಾರದ ಕಾರ್ಯಕರ್ತರಿಂದ ಪ್ರಯಾಣಿಕನಿಗೆ ಹ#ಲ್ಲೆ; ಪೊಲೀಸ್ ನಿರ್ಲಕ್ಷವೇ ಇದಕ್ಕೆ ಪ್ರೇರಣೆ: ದ.ಕ. ಜಿಲ್ಲಾ ಮುಸ್ಲಿಮ್ ವರ್ತಕರ ಸಂಘ
ಇದರ ಮುಂದುವರಿದ ಭಾಗ ಎಂಬಂತೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಮುಲ್ಲರಪಟ್ನ ನಿವಾಸಿ ಇಸಾಕ್ ಮೇಲೆ ಬಸ್ ಕಂಡೆಕ್ಟರ್ ಸೇರಿದಂತೆ ಸಂಘಪರಿವಾರದ ಕಾರ್ಯಕರ್ತರು ಮಾರ#ಣಾಂತಿಕವಾಗಿ ಹ#ಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ನಡೆದಿದೆ ಎಂದು ಅವರು ದೂರಿದ್ದಾರೆ.
ಈ ರೀತಿ ಹ#ಲ್ಲೆ ನಡೆಸುವವರ ವಿರುದ್ದ ಪೊಲೀಸ್ ಇಲಾಖೆಯಿಂದ ಕಠಿಣ ಕಾನೂನು ಕ್ರಮ ಜರಗಿಸದೆ ಠಾಣೆಯಲ್ಲಿಯೇ ಜಾಮೀನು ನೀಡಿ ಬಿಡಬಹುದಾದ ಸಾಮಾನ್ಯ ಕೇಸ್ ದಾಖಲಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಈ ರೀತಿಯ ನಿರ್ಲಕ್ಷ್ಯದಿಂದಲೇ ಸಂಘಪರಿವಾರದವರು ಮತ್ತೆ ಮತ್ತೆ ಕಾನೂನು ಕೈಗೆತ್ತಿಕೊಳ್ಳುವಂತೆ ಪ್ರೋತ್ಸಾಹ ಸಿಗುತ್ತಿದೆ. ಇದು ಹೀಗೆಯೇ ಮುಂದುವರಿದೆರೆ ಇಲ್ಲಿ ಮುಸ್ಲಿಮರು ಜೀವಿಸುವುದಾದರೂ ಹೇಗೆ?
ಇದಕ್ಕೆ ಮುಸ್ಲಿಮರೇನಾದರೂ ರಕ್ಷಣಾತ್ಮಕ ಪ್ರತಿಕ್ರಿಯೆ ನೀಡಿದರೆ ಅವರ ವಿರುದ್ಧ ದೇ#ಶದ್ರೋ#ಹ, ಭ#ಯೋ#ತ್ಪಾದನೆಯಂತಹ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದನ್ನು ಇನ್ನೆಷ್ಟು ದಿನ ಸಹಿಸಿಕೊಂಡಿರುವುದು.
ಮುಖ್ಯಮಂತ್ರಿಯೇ ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳುತ್ತಿರುವಾಗ ಆಡಳಿತದಲ್ಲಿ ಇರುವವರೂ ನಮ್ಮ ಸಹಾಯಕ್ಕೆ ಬರುತ್ತಾರೆ ಎಂದುಕೊಳ್ಳುವಂತೆಯೇ ಇಲ್ಲ ಎಂದು ಅಲಿ ಹಸನ್ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.