ಉ#ಗ್ರರ ವಿಚಾರದಲ್ಲಿ  ಕಾಂಗ್ರೆಸ್ ನಿಲುವೇನು ? ಡಿಕೆಶಿ ಹೇಳಿಕೆಗೆ CM ಬೊಮ್ಮಾಯಿ ಆಕ್ರೋಶ

ಉ#ಗ್ರರ ವಿಚಾರದಲ್ಲಿ ಕಾಂಗ್ರೆಸ್ ನಿಲುವೇನು ? ಡಿಕೆಶಿ ಹೇಳಿಕೆಗೆ CM ಬೊಮ್ಮಾಯಿ ಆಕ್ರೋಶ



ಮಂಡ್ಯ(Headlines Kannada): ಮಂಗಳೂರಿನಲ್ಲಿ ಕುಕ್ಕರ್ ಬಾಂ#ಬ್ ಸ್ಫೋ#ಟ ಪ್ರಕರಣವನ್ನು ಬಿಜೆಪಿ ಸರಕಾರ ತನ್ನ ಭ್ರ#ಷ್ಟಾಚಾರವನ್ನು ಮುಚ್ಚಿ ಹಾಕಲು ಡೈವರ್ಟ್ ಮಾಡಿದೆ ಎಂದು ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಮಾತನಾಡಿದ್ದಾರೆ.

ಉ#ಗ್ರರ ವಿಚಾರದಲ್ಲಿ ಕಾಂಗ್ರೆಸ್​ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲಿ ಯಾವುದೇ ಭ#ಯೋ#ತ್ಪಾದಕ ಕೃತ್ಯ ನಡೆದರೂ ಕಾಂಗ್ರೆಸಿನವರು ಇದೇ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ಮನಸ್ಥಿತಿ ಆಗಿದೆ. ಶಾರಿಕ್ ಭ#ಯೋ#ತ್ಪಾದಕ ಅಲ್ಲದಿದ್ದರೆ, NIA ತನಿಖೆ ಯಾಕೆ ಸ್ವೀಕರಿಸುತ್ತಿತ್ತು? ರಾಜ್ಯದಲ್ಲಿ ಸರಕಾರ ನಡೆಸಿದವರಿಗೆ ಇದು ಗೊತ್ತಿರಬೇಕಿತ್ತು ಎಂದಿದ್ದಾರೆ.

ಮಂಡ್ಯದ ಪಾಂಡುಪುರ ತಾಲೂಕಿನಲ್ಲಿ ನಡೆಯುತ್ತಿರುವ ಜನಸಂಕಲ್ಪ ಕಾರ್ಯಕ್ರಮಕ್ಕೆ ಆಗಮಿಸಿದ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿ, ಶಂಕಿತ ಉ#ಗ್ರ ಶಾರಿಕ್​ ವಿಷಯದಲ್ಲಿ ಡಿಕೆಶಿ ನೀಡಿರುವ ಹೇಳಿಕೆಯನ್ನು ಖಂಡಿಸಿ, ಉಗ್ರರ ವಿಚಾರದಲ್ಲಿ  ಕಾಂಗ್ರೆಸ್ ನಿಲುವೇನು ಎಂದು ಪ್ರಶ್ನಿಸಿದರು.

ಬೇರೆ ವಿಚಾರ ಡೈವರ್ಟ್​ ಮಾಡುವ ಅಗತ್ಯ ನಮಗಿಲ್ಲ. ಅಲ್ಲದೇ ಶಾರಿಕ್ ವಿ#ಧ್ವಂ#ಸಕ ಕೃ#ತ್ಯಕ್ಕೆ ತಯಾರಾಗಿದ್ದ ಎಂಬುದಕ್ಕೆ ನಮ್ಮಲ್ಲಿ ಬೇಕಾದಷ್ಟು ಸಾಕ್ಷಿಗಳಿವೆ. ಕಾಂಗ್ರೆಸಿಗರಿಗೆ ಹೇಗೆ ಮಾತನಾಡಬೇಕೆಂಬ ಜ್ಞಾನ ಇಲ್ಲ,  ಭಾರತ ಮತ್ತು ಚೀನಾ ಗಲಾಟೆಯಲ್ಲೂ ನಮ್ಮ ಯೋಧರ ಮನಸ್ಥಿತಿಯನ್ನು ಕುಗ್ಗಿಸುವ ರೀತಿಯಲ್ಲೇ ಕಾಂಗ್ರೆಸಿನವರು ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Ads on article

Advertise in articles 1

advertising articles 2

Advertise under the article