ಚಿಕ್ಕಮ್ಮನನ್ನು ಸು#ತ್ತಿಗೆಯಿಂದ ಹೊ#ಡೆದು ಕೊಂ#ದು 10 ತುಂ#ಡುಗಳಾಗಿ ಕ#ತ್ತರಿಸಿ ಹೆದ್ದಾರಿಯಲ್ಲಿ ಎಸೆದ ಕ#ಟುಕ! ಅಷ್ಟಕ್ಕೂ ಕೊ#ಲೆಗೆ ಕಾರಣವೇನು? ಸಿಕ್ಕಾಕಿಕೊಂಡಿದ್ದು ಹೇಗೆ..?



ಜೈಪುರ(Headlines Kannada): ಮನೆಯಿಂದ ಹೊರಗೆ ಹೋಗಲು ಬಿಡಲಿಲ್ಲ ಎಂಬ ಕಾರಣಕ್ಕೆ ತನ್ನ ಚಿಕ್ಕಮ್ಮನನ್ನೇ ಕೊಂ#ದು 10 ತುಂ#ಡುಗಳಾಗಿ ಕ#ತ್ತರಿಸಿ ಹೆದ್ದಾರಿಯಲ್ಲಿ ಎಸೆದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. 

ಕೊ#ಲೆಯಾದವರನ್ನು ಸರೋಜಾ (64) ಎಂದು ಹಾಗು ಕೊ#ಲೆಗೈದ ಆರೋಪಿಯನ್ನು ಅನುಜ್ ಶರ್ಮಾ (32 ವರ್ಷ) ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಲಾಗಿದೆ. 

ಡಿ.11ರಂದು ಅನುಜ್‍ನ ತಂದೆ, ಸಹೋದರಿ ಇಂದೋರ್‌ಗೆ ಹೊರಟಿದ್ದು, ಈ ವೇಳೆ  ಅನುಜ್‍ನನ್ನು ಹೋಗದಂತೆ ತಡೆದದ್ದಕ್ಕೆ ಚಿಕ್ಕಮ್ಮ ಸರೋಜಾ ಮೇಲೆ ಸಿ#ಟ್ಟುಗೊಂಡು ಜಗ#ಳಕ್ಕಿಳಿದಿದ್ದಾನೆ. ಈ ವೇಳೆ ಸರೋಜಾಳ ತಲೆಗೆ ಅನುಜ್ ಸು#ತ್ತಿಗೆಯಿಂದ ಹೊ#ಡೆದಿದ್ದಾನೆ. ಸ#ತ್ತಿದ್ದಾಳೆ ಎಂದು ಅರಿವಾಗುತ್ತಿದ್ದಂತೆ ಆಕೆಯ ದೇ#ಹವನ್ನು ಮಾರ್ಬಲ್ ಕಟರ್‌ನಿಂದ 10 ತುಂ#ಡುಗಳಾಗಿ ಕ#ತ್ತರಿಸಿ ಬಕೆಟ್ ನಲ್ಲಿ ತುಂಬಿಕೊಂಡು ಜೈಪುರ-ಸಿಕರ್ ಹೆದ್ದಾರಿಯಲ್ಲಿ ದೂರದ ಪ್ರದೇಶದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾನೆ.

ಈ ಕೃ#ತ್ಯ ಎಸಗಿದ ನಂತರ ಚಿಕ್ಕಮ್ಮ ಸರೋಜಾ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರಿಗೆ ತನಿಖೆ ಸಮಯದಲ್ಲಿ ಅನುಜ್ ಸುಳ್ಳು ಹೇಳಿಕೆ ನೀಡಿದ್ದಾನೆ ಎಂಬ ವಿಷಯ ತಿಳಿದ  ಹಿನ್ನೆಲೆಯಲ್ಲಿ ಆತನ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದಾರೆ. ಅಷ್ಟೇ ಅಲ್ಲದೇ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅನುಜ್ ಸೂಟ್‍ಕೇಸ್ ಹಾಗು ಬಕೆಟ್‍ನೊಂದಿಗೆ ಮನೆಯಿಂದ ಹೊರಹೋಗಿರುವುದು ಕಂಡುಬಂದಿದೆ. ಅನುಜ್‍ನನ್ನು ವಶಕ್ಕೆ ಪಡೆದು ಮತ್ತೆ ತನಿಖೆ ನಡೆಸಿದ ಪೊಲೀಸರಿಗೆ ನಡೆದ ಕೃ#ತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಈ ವೇಳೆ ಅನುಜ್ ತನ್ನ ಚಿಕ್ಕಮ್ಮನ ತಲೆಗೆ ಸು#ತ್ತಿಗೆಯಿಂದ ಹೊಡೆದು ಕೊ#ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.