6 ತಿಂಗಳ ಹಿಂದೆ ನಡೆದ ವ್ಯಕ್ತಿಯೊಬ್ಬನ ಸಾ#ವಿನ ಪ್ರಕರಣ; ಕೊ#ಲೆಯ ರಹಸ್ಯ ಬಾಯ್ಬಿಟ್ಟ ಮಕ್ಕಳು! ಅಷ್ಟಕ್ಕೂ ಕೊ#ಲೆ ಮಾಡಿದ್ದು ಯಾರು ಗೊತ್ತೇ..?

6 ತಿಂಗಳ ಹಿಂದೆ ನಡೆದ ವ್ಯಕ್ತಿಯೊಬ್ಬನ ಸಾ#ವಿನ ಪ್ರಕರಣ; ಕೊ#ಲೆಯ ರಹಸ್ಯ ಬಾಯ್ಬಿಟ್ಟ ಮಕ್ಕಳು! ಅಷ್ಟಕ್ಕೂ ಕೊ#ಲೆ ಮಾಡಿದ್ದು ಯಾರು ಗೊತ್ತೇ..?



ಬೆಂಗಳೂರು: 6 ತಿಂಗಳ ಹಿಂದೆ ನಡೆದ ವ್ಯಕ್ತಿಯೊಬ್ಬನ ಸಾ#ವಿನ ಪ್ರಕರಣವೊಂದರ ಅಸಲಿಯತ್ತು ಇದೀಗ ಬಯಲಾಗಿದ್ದು, ಆತನ ಪತ್ನಿ ಹಾಗು ಪ್ರಿಯಕರ ಕಂಬಿಯ ಹಿಂದೆ ಸೇರಿದ್ದಾರೆ.

ಆರು ತಿಂಗಳ ಹಿಂದೆ ಮ#ದ್ಯ ಸೇವನೆ ಮಾಡಿ ಬಂದು ಮಲಗಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾ#ವನ್ನಪ್ಪಿದ್ದು ಎಂದು ಆತನ ಪತ್ನಿ ಎಲ್ಲರನ್ನು ನಂಬಿಸಿದ್ದಳು. ತನ್ನ ತಂದೆಯ ಹ#ತ್ಯೆಯನ್ನು ಕಣ್ಣಾರೆ ಕಂಡಿದ್ದ ಮಕ್ಕಳು ಈಗ ಎಲ್ಲವನ್ನು ಬಾಯಿಬಿಟ್ಟಿದ್ದಾರೆ.

 ಕೊ#ಲೆ ಪ್ರಕರಣದ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ತನ್ನ ತಂದೆಯ ಹ#ತ್ಯೆಯನ್ನು ಕಣ್ಣಾರೆ ಕಂಡಿದ್ದ ಮಕ್ಕಳು, ಘಟನೆ ನಡೆದ ಆರು ತಿಂಗಳ ನಂತರ ತನ್ನ ತಾಯಿಯ ಕ್ರೂರತೆ ಬಗ್ಗೆ ಬಾಯಿಬಿಟ್ಟಿದ್ದಾರೆ. ಕು#ಡಿದು ಬಂದು ಮಲಗಿದ್ದ ತಂದೆಯನ್ನು ತಾಯಿ ಅನಿತಾ (31) ಹಾಗೂ ವ್ಯಕ್ತಿಯೊಬ್ಬರ ಜೊತೆ ಸೇರಿಸಿಕೊಂಡು ಉ#ಸಿರುಗಟ್ಟಿಸಿ ಕೊ#ಲೆ  ಮಾಡಿರುವುದಾಗಿ ಮಕ್ಕಳು ಬಾಯಿಬಿಟ್ಟಿದ್ದಾರೆ.

ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಂಜಯ್ ಗಾಂಧಿನಗರದ ಸ್ಲಂನಲ್ಲಿ 6 ತಿಂಗಳ ಹಿಂದೆ ಆಂಜನೇಯ (35) ಎಂಬ ವ್ಯಕ್ತಿ ಸಾ#ವನ್ನಪ್ಪಿದ್ದರು. ಕು#ಡಿದು ಬಂದು ಮಲಗಿದ್ದ ತಂದೆಯನ್ನು ತಾಯಿ ಅನಿತಾ (31) ಹಾಗೂ ಆಕೆಯ ಪ್ರಿಯಕರ ರಾಕೇಶ್ ಜೊತೆ ಸೇರಿಸಿಕೊಂಡು ಉ#ಸಿರುಗಟ್ಟಿಸಿ ಕೊ#ಲೆ ಮಾಡಿದ್ದರು. ಇದನ್ನೆಲ್ಲ ನೋಡಿದ ಮಕ್ಕಳಿಗೆ ತಂದೆ ಸರಿಯಿಲ್ಲ, ಯಾರಿಗೂ ಹೇಳಬೇಡಿ ಎಂದು, ಹಾರ್ಟ್ ಅಟ್ಯಾಕ್ ಆಗಿದೆ ಅಂತ ಸಂಬಂಧಿಕರಿಗೆ ಆಂಜನೇಯನ ಪತ್ನಿ ಕಟ್ಟುಕತೆ ಹೇಳಿದ್ದಳು.

ಬಳಿಕ ಅನಿತಾಳ ಮರಳು ಮಾತನ್ನು ನಂಬಿದ ಕುಟುಂಬಸ್ಥರು ಆಂಜನೇಯ ಅವರ ಅಂ#ತ್ಯಕ್ರಿಯೆ ಮಾಡಿದ್ದರು. ಇದೆಲ್ಲ ಆದ ನಂತರ ಇತ್ತೀಚೆಗೆ ಮಕ್ಕಳನ್ನು ಬಿಟ್ಟು ಪ್ರಿಯಕರ ರಾಕೇಶ್ ಜೊತೆ ಅನಿತಾ ಹೋಗಿದ್ದಾಳೆ. ಇದೇ ವೇಳೆ ಮಕ್ಕಳು ತಂದೆಯನ್ನು ತಾಯಿ ಕೊ#ಲೆ ಮಾಡಿರುವುದನ್ನೆಲ್ಲ ಅಜ್ಜಿಯ ಬಳಿ ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ಮೃ#ತನ ತಾಯಿ (ಮಕ್ಕಳ ಅಜ್ಜಿ) ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಆರೋಪಿಗಳಾದ ಅನಿತಾ ಹಾಗು ಈಕೆಯ ಪ್ರಿಯಕರ ರಾಕೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article