'ಇಂದಿರಾ ಟ್ರೋಫಿ-2023 ಕ್ರಿಕೆಟ್ ಉತ್ಸವ'ದಲ್ಲಿ ಭಾಗವಹಿಸಿ ಶುಭ ಹಾರೈಸಿದ ಇನಾಯತ್ ಅಲಿ
Monday, February 6, 2023
ಮಂಗಳೂರು(Headlines Kannada): ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಹಾಗೂ ಸುರತ್ಕಲ್ ಬ್ಲಾಕ್ ಯುವ ಕಾಂಗ್ರೆಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಬೊಂದೇಲ್ನಲ್ಲಿ ರವಿವಾರ 'ಇಂದಿರಾ ಟ್ರೋಫಿ-2023 ಕ್ರಿಕೆಟ್ ಉತ್ಸವ'ವನ್ನು ಆಯೋಜಿಸಲಾಗಿತ್ತು.
ಈ ಕ್ರಿಕೆಟ್ ಪಂದ್ಯಾಕೂಟದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭಾಗವಹಿಸಿ, ಆಟಗಾರರಿಗೆ ಶುಭ ಕೋರಿದರು.
23 ವಾರ್ಡುಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ ವಿಜೇತ ತಂಡಕ್ಕೆ 50 ಸಾವಿರ ರೂ. ನಗದು ಮತ್ತು ಇಂದಿರಾ ಟ್ರೋಫಿ , ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 25 ಸಾವಿರ ರೂ. ನಗದು ಮತ್ತು ಇಂದಿರಾ ಟ್ರೋಫಿ ನೀಡಲಾಯಿತು.