ಡಿ.ಐ. ಅಬೂಬಕರ್ ಕೈರಂಗಳರಿಗೆ ದ.ಕ ಜಿಲ್ಲಾ ಕಸಾಪದಿಂದ ಸನ್ಮಾನ

ಡಿ.ಐ. ಅಬೂಬಕರ್ ಕೈರಂಗಳರಿಗೆ ದ.ಕ ಜಿಲ್ಲಾ ಕಸಾಪದಿಂದ ಸನ್ಮಾನ

ಉಜಿರೆ(Headlines Kannada): ರವಿವಾರ ನಡೆದ ದ.ಕ‌. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 25 ನೆಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಸೇವೆಗಾಗಿ ಖ್ಯಾತ ಸಾಹಿತ್ಯ ಸಾಧಕ ಡಿ.ಐ. ಅಬೂಬಕರ್ ಕೈರಂಗಳ ಅವರನ್ನು ಸನ್ಮಾನಿಸಲಾಯಿತು.  

ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯೊಂದಿಗೆ  ಕ‌‌.ಸಾ.ಪ. ದ.ಕ.ಜಿಲ್ಲಾ ಅಧ್ಯಕ್ಷರಾದ ಶ್ರೀ ಎಂ‌.ಪಿ. ಶ್ರೀನಾಥ್ ರವರ ಅಧ್ಯಕ್ಷತೆಯಲ್ಲಿ  ಸನ್ಮಾನ ಕಾರ್ಯಕ್ರಮ ಜರುಗಿತು. ಕರ್ನಾಟಕ ಬ್ಯಾಂಕಿನ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಮಹಾಬಲೇಶ್ವರ ಎಂ.ಎಸ್. ಸನ್ಮಾನ ಕಾರ್ಯ ನಿರ್ವಹಿಸಿದರು.  ಸಮ್ಮೇಳನಾಧ್ಯಕ್ಷೆ  ಶ್ರೀಮತಿ ಹೇಮಾವತಿ ಡಿ. ಹೆಗ್ಗಡೆ, ಉಡುಪಿ ಜಿಲ್ಲಾ  ಕ‌.ಸಾ.ಪ‌. ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗ, ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಶ್ರೀ ತಾಳ್ತಜೆ ವಸಂತ ಕುಮಾರ್ ಮುಖ್ಯದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article