
ಬೆಳಪುವಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ NSS ಶಿಬಿರಾರ್ಥಿಗಳಿಗೆ SDPI ವತಿಯಿಂದ ಅನ್ನ ಸಂತರ್ಪಣೆ
Tuesday, March 21, 2023
ಉಚ್ಚಿಲ: ಬೆಳಪು ಗ್ರಾಮದ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಕಾಲೇಜಿನ 6 ದಿವಸದಿಂದ NSS ಕ್ಯಾಂಪ್ ನಡೆಸುತ್ತಿರುವ ಮಂಗಳೂರಿನ ರಾಮಕೃಷ್ಣ ಕಾಲೇಜಿನ ವಿದ್ಯಾರ್ಥಿಗಳಿಗೆ SDPI ವತಿಯಿಂದ ಅನ್ನ ಸಂತರ್ಪಣೆ ಕಾರ್ಯವನ್ನು SDPI ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹನೀಫ್ ಮೂಳೂರು ಅವರ ಸಮ್ಮುಖದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬೆಳಪು SDPI ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾದ ನಫೀಸ್ ಬಾನು, ಬೆಳಪು ಗ್ರಾಮ ಸಮಿತಿ ಅಧ್ಯಕ್ಷ ಲೇಖತ್, ಸಿದ್ದಿಕ್ ಬೆಳಪು, ಫಹದ್ ಮತ್ತು ಸದಸ್ಯರು ಭಾಗವಹಿಸಿದ್ದರು.