![ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಸವರಾಜ ಬೊಮ್ಮಾಯಿ](https://blogger.googleusercontent.com/img/b/R29vZ2xl/AVvXsEjY3gB9D9UO_aT5GR3hWwcoMZ2NgVL7OjdodKxVTRtvBp6qrLqEI3uVN3qZkr1i5eJ1fK5NyvE5FWTsy8MTfjh2Ow-kv4lQnN74k1BTPJYwPML89X0NAFmUOF4THP2_Pg-0wE_4ScF4C3IIERsEx3zqtLXu1jHk3MBTDCkeELtjy1H3PS2qriIl98Mlkg/w640-h480/bommayi.jpg)
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಸವರಾಜ ಬೊಮ್ಮಾಯಿ
ಬೆಂಗಳೂರು : ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿಯವರು ಶನಿವಾರ ತಡರಾತ್ರಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಬಿಜೆಪಿ ಭಾರೀ ಅಂತದಲ್ಲಿ ಸೋಲು ಕಂಡಿದೆ. ಈ ಕಾರಣದಿಂದ ಸದ್ಯ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೆಂಗಳೂರಿನ ರಾಜಭವನಕ್ಕೆ ತೆರಳಿ ರಾಜಪಾಲರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ಕೊಟ್ಟರು. ಈ ಸಂದರ್ಭದಲ್ಲಿ ಶಾಸಕರಾದ ಬೈರತಿ ಬಸವರಾಜ್, ಸುರೇಶ್ ಕುಮಾರ್ , ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹಾಜರಿದ್ದರು.
ಬಸವರಾಜ ಎಸ್ ಬೊಮ್ಮಾಯಿ ಅವರು ಅಚ್ಚರಿ ಅಭ್ಯರ್ಥಿಯಾಗಿ 2021 ಜುಲೈ 28 ರಂದು ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸದ್ಯ 2023 ಮೇ 13ರವರೆಗೂ ಇಪ್ಪತೊಂದೂವರೆ ತಿಂಗಳು ರಾಜ್ಯಭಾರ ಮಾಡಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಬೊಮ್ಮಾಯಿ 2022 ರಲ್ಲಿ ಮಾರ್ಚ್ ಹಾಗೂ 2023 ಮಾರ್ಚ್ನಲ್ಲಿ ಬಜೆಟ್ ಘೋಷಣೆ ಮಂಡಣೆ ಮಾಡಿದ್ದರು.