ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ಬರಬೇಕಿದ್ದರೆ ನನಗೆ ಮತ ಹಾಕಿ: ಗುರ್ಮೆ ಸುರೇಶ್ ಶೆಟ್ಟಿ

ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ಬರಬೇಕಿದ್ದರೆ ನನಗೆ ಮತ ಹಾಕಿ: ಗುರ್ಮೆ ಸುರೇಶ್ ಶೆಟ್ಟಿ

ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ರವಿವಾರ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಸಾರು ಪ್ರದೇಶದಲ್ಲಿ ಮಾತಾಯಾಚನೆ ಮಾಡಿದರು.



ಈ ಸಂದರ್ಭದಲ್ಲಿ ಮಾತನಾಡಿದ, ಗುರ್ಮೆ ಸುರೇಶ್ ಶೆಟ್ಟಿಯವರು, ರಾಜಕೀಯದಲ್ಲಿ ಜಾತಿ ಬರಬಾರದು, ಜಾತಿ ರಾಜಕೀಯದಲ್ಲಿ ಯಾವತ್ತು ನಮಗೆ ಒಳಿತಿಲ್ಲ, ಮೊದಲು ನಮ್ಮ ಧರ್ಮ ಗೆಲ್ಲಬೇಕು. ಧರ್ಮದ ಸಂಕಲ್ಪ ಗೆಲ್ಲಬೇಕು ಎಂದು ಆಶೀಸಿದರು. ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ಬರಬೇಕು ಎಂದು ಇದಕ್ಕೆ ನೀಮ್ಮ ಬೆಂಬಲ ಅಗತ್ಯ ಎಲ್ಲರೂ ಮೇ 10ರಂದು ಮತದಾನ ಮಾಡಿ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕಾಗಿ ಕೇಳಿಕೊಂಡರು.

 ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು, ಗೀತಾ ಸುವರ್ಣ, ಪಂಚಾಯತ್ ಸದಸ್ಯರು ಶ್ರೀನಿವಾಸ್ ಕಿನ್ನಿ, ಸುಭಾಸ್ ಬಲ್ಲಾಲ್, ಕವಿತಾ, ಸುಮತಿ ಶೇರಿಗಾರ್, ಹಾಗೂ ಪಕ್ಷದ ಕಾರ್ಯಕರ್ತರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article