ಇಂದು ಗುರುಪುರದಲ್ಲಿ ಸಾಕ್ಷಿಯಾಗಲಿರುವ ಅದ್ದೂರಿ ಹೊನಲು ಬೆಳಕಿನ ಜೋಡುಕರೆ ಕಂಬಳಕ್ಕೆ ಕ್ಷಣಗಣನೆ

ಇಂದು ಗುರುಪುರದಲ್ಲಿ ಸಾಕ್ಷಿಯಾಗಲಿರುವ ಅದ್ದೂರಿ ಹೊನಲು ಬೆಳಕಿನ ಜೋಡುಕರೆ ಕಂಬಳಕ್ಕೆ ಕ್ಷಣಗಣನೆ

ಗುರುಪುರ: ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್‌ ಮೂಳೂರು – ಅಡ್ಡೂರು ಪ್ರಥಮ ವರ್ಷದ ಹೊನಲು ಬೆಳಕಿನ ಜೋಡುಕರೆ ಕಂಬಳ ಎ. 12ರಂದು ಗುರುಪುರದ ಮಾಣಿಬೆಟ್ಟು ಗುತ್ತುವಿನಲ್ಲಿ ನಡೆಯಲಿದೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಗೌರವಾಧ್ಯಕ್ಷತೆಯಲ್ಲಿ ನಡೆಯಲಿರುವ ಅದ್ದೂರಿ ಕಂಬಳಕ್ಕೆ ಬೆಳಗ್ಗೆ 8.30ಕ್ಕೆ ಚಾಲನೆ ದೊರೆಯಲಿದ್ದು, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಉದ್ಘಾಟಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಆನುವಂಶಿಕ ಅರ್ಚಕ ಅನಂತ ಅಸ್ರಣ್ಣ ದೀಪ ಬೆಳಗಲಿದ್ದು, ಗುರುಪುರ ಪೊಂಪೈ ಚರ್ಚ್‌ನ ಧರ್ಮಗುರು ವಂ.ರೊಡಾಲ್ಫ್ ರವಿ ಡೆಸಾ, ಗುರುಪುರ ದಾರುಸಲಾಂ ಜುಮ್ಮಾ ಮಸೀದಿಯ ಖತೀಬರಾದ ಜಮಾಲ್‌ ದಾರಿಮಿ ಶುಭ ಸಂದೇಶ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article