ಲಂಡನ್‌ನಲ್ಲಿ ಮೇ 23 ರಂದು ಮೈಸೂರಿನ 'ಹುಲಿ' ಟಿಪ್ಪು ಸುಲ್ತಾನ್‌ನ ಅಪರೂಪದ ಚಿನ್ನಾಭರಣ ಖಡ್ಗ ಹರಾಜು

ಲಂಡನ್‌ನಲ್ಲಿ ಮೇ 23 ರಂದು ಮೈಸೂರಿನ 'ಹುಲಿ' ಟಿಪ್ಪು ಸುಲ್ತಾನ್‌ನ ಅಪರೂಪದ ಚಿನ್ನಾಭರಣ ಖಡ್ಗ ಹರಾಜು

ಟಿಪ್ಪು ಸುಲ್ತಾನ್ ಕೊನೆಯದಾಗಿ ಬಳಸಿದ ಈ ಖಡ್ಗವನ್ನು ಈ ಹಿಂದೆ ಹರಾಜು ಮಾಡಲಾಗಿತ್ತು. ಮದ್ಯದ ದೊರೆ ವಿಜಯ ಮಲ್ಯ 2004 ರಲ್ಲಿ ಅದನ್ನು ಖಾಸಗಿ ಹರಾಜಿನಲ್ಲಿ 1.5 ಕೋಟಿ ರೂ.ಗೆ ಖರೀದಿಸಿದ್ದರು.

ಮುಂದಿನ ಮಂಗಳವಾರ ಮೇ 23 ರಂದು ಲಂಡನ್‌ನಲ್ಲಿ ನಡೆಯಲಿರುವ ಹರಾಜಿನಲ್ಲಿ (auction) ಇತಿಹಾಸದ (history) ಮಹತ್ವದ ತುಣುಕೊಂದು ಹರಾಜಿಗೆ ಬರಲಿದೆ. ಮೈಸೂರಿನ ಹುಲಿ ಎಂದೇ ಖ್ಯಾತರಾದ ಟಿಪ್ಪು ಸುಲ್ತಾನ್'ಗೆ ಸೇರಿದ ಅಮೂಲ್ಯವಾದ ಚಿನ್ನಾಭರಣದ ಖಡ್ಗ ಅದಾಗಿದೆ. ಅದನ್ನು ಟಿಪ್ಪು ಸುಲ್ತಾನ್ ತನ್ನ ಶಯ್ಯ ಕೋಣೆಗಳಲ್ಲಿ ಇಡುತ್ತಿದ್ದನಂತೆ. ಇತಿಹಾಸದ ಬಗ್ಗೆ ಅಪಾರ ಉತ್ಸಾಹ ಹೊಂದಿರುವ ಶ್ರೀಮಂತ ವ್ಯಕ್ತಿಯೊಬ್ಬರ ಮನೆಯಲ್ಲಿ ಈ ಖಡ್ಗವನ್ನು ಪ್ರದರ್ಶನಕ್ಕಿಡುವ ಸಾಧ್ಯತೆಯಿದೆ. ಲಂಡನ್‌ನಲ್ಲಿ ಟಿಪ್ಪು ಸುಲ್ತಾನ್‌ನ ಚಿನ್ನದ ಕತ್ತಿ ಹರಾಜಿಗೆ ಬರಲಿದ್ದು, ಸದ್ಯಕ್ಕೆ ಅದನ್ನು ಗಾಜಿನ ಪೆಟ್ಟಿಗೆಯಲ್ಲಿ ಅವರ ಮನೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಉಕ್ಕಿನ ಖಡ್ಗದ ಮೇಲಿನ ಚಿನ್ನದ ಹಿಡಿಕೆಯನ್ನು ರಾಜಸ್ಥಾನದ ಬುಡಕಟ್ಟು ಜನಾಂಗದ ರಾಜರ ಆಯುಧದ ಕಲೆಯಿಂದ ಕೆತ್ತನೆ ಮಾಡಲಾಗಿದೆ. ಕೋಫ್ಟಗರಿ ಅಲಂಕಾರಿಕ ಕುಸುರಿ ಕೆಲಸವೆಂದು (koftgari ornamental work) ಗುರುತಿಸಲಾಗಿದೆ. 1782 ರಲ್ಲಿ ತನ್ನ ತಂದೆಯ ಮರಣದ ನಂತರ ಅಧಿಕಾರಕ್ಕೆ ಏರಿದ ಟಿಪ್ಪುವಿನ ವಶದಲ್ಲಿ ಆ ಖಡ್ಗವಿತ್ತು. ರಾಜನು 1782 ರಿಂದ 1799 ರವರೆಗೆ ಇದನ್ನು ತನ್ನ ಸುಪರ್ದಿಯಲ್ಲಿ ಹೊಂದಿದ್ದನೆಂದು ಇತಿಹಾಸ ತಿಳಿಸುತ್ತದೆ.

ಖಡ್ಗದಲ್ಲಿ ಕತ್ತಿಯ ಹಿಡಿತದ ತುದಿಯಿಂದ ಕತ್ತಿಯ ಮೊನಚಿನವರೆಗೂ ತುಳುತ್ (thuluth), ಬುಬ್ರಿ ಮೋಟಿಫ್‌ಗಳನ್ನು (bubri motifss) ಕೆತ್ತಲಾಗಿದೆ. ಇದು ಸುಮಾರು 100 ಸೆಂ.ಮೀ. ಉದ್ದವಾಗಿದೆ ಮತ್ತು ಭಾರತೀಯ ಇತಿಹಾಸದ ಅಮೂಲ್ಯವಾದ ತುಣುಕು ಎಂದು ಪರಿಗಣಿಸಲಾಗಿದೆ. ವಿವಾದಗಳ ಹೊರತಾಗಿಯೂ ಟಿಪ್ಪು ಸುಲ್ತಾನ್ ಭಾರತೀಯ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಯಾಗಿ ಉಳಿದಿದ್ದಾರೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧದ ಹೋರಾಡಿ ಹೆಸರುವಾಸಿಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article