
ಬೆಂಗಳೂರಿನಲ್ಲಿ ರೈತ ರಥ ಯಾತ್ರೆಗೆ ಚಾಲನೆ ನೀಡಿದ ಡಾ. ಶೇಖ್ ವಾಹೀದ್ ದಾವೂದ್; ಸಮಾಜ ಸೇವೆಗಾಗಿ ಗೌರವ ಸನ್ಮಾನ
Thursday, June 19, 2025
ಬೆಂಗಳೂರು: ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ(ರಿ)ಹಾಗೂ ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ ರೈತರ ಸಮಸ್ಯೆಗಳನ್ನು ಕ್ರೋಢೀಕರಿಸಿ ಸಮಸ್ಯೆಗಳ ಪರಿಹಾರಕ್ಕಾಗಿ ರೈತ ರಥ ಯಾತ್ರೆ ಚಾಲನೆ ಮತ್ತು ಲಾಂಛನ ಬಿಡುಗಡೆ ಸಮಾರಂಭ ಸೋಮವಾರ ನಡೆಯಿತು.
ಕೆಪಿಸಿಸಿ ಜನರಲ್ ಸೆಕ್ರೆಟರಿ ಹಾಗೂ ಮೈನಾರಿಟಿ ಕಮಿಟಿಯ ಎಲ್ಎನ್ ಡಾ. ಶೇಖ್ ವಾಹೀದ್ ದಾವೂದ್ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ, ಡಾ. ಕೆಂಚನೂರು ಶಂಕರ ಹಾಗೂ ಹಲವು ನಾಯಕರು ಹಾಜರಿದ್ದರು. ಈ ವೇಳೆ ಡಾ. ಶೇಖ್ ವಾಹೀದ್ ದಾವೂದ್ ಅವರ ಸಮಾಜ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.