ಬಿಜೆಪಿಯ ಕ್ರಿ#ಮಿನಲ್ ಗ್ಯಾಂ#ಗ್ ಡಬ್ಬ ಹಿಡಿದು ಸುಂಕ ವಸೂಲಿಗೂ ನಿಲ್ಲಬಹುದು: ಉಡುಪಿಯಲ್ಲಿ ಮುನೀರ್ ಕಾಟಿಪಳ್ಳ

ಬಿಜೆಪಿಯ ಕ್ರಿ#ಮಿನಲ್ ಗ್ಯಾಂ#ಗ್ ಡಬ್ಬ ಹಿಡಿದು ಸುಂಕ ವಸೂಲಿಗೂ ನಿಲ್ಲಬಹುದು: ಉಡುಪಿಯಲ್ಲಿ ಮುನೀರ್ ಕಾಟಿಪಳ್ಳ

ಉಡುಪಿ (Headlines Kannada): ಬಿಜೆಪಿಯ ಡಬ್ಬ ಇಂಜಿನ್ ಸರಕಾರದಲ್ಲಿ ಯಾವುದು ಬೇಕಾದರೂ ನಡೆಯಬಹುದು, ಅದರಲ್ಲಿ ಅಚ್ಚರಿಯಿಲ್ಲ. ಕ್ರಿ#ಮಿನಲ್ ಗ್ಯಾಂ#ಗ್ ಕೂಡ ಡಬ್ಬ ಹಿಡಿದು ಸುಂಕ ವಸೂಲಿಗೂ ನಿಲ್ಲಬಹುದು. ಡಬ್ಬ ಸರಕಾರದ ಡಬ್ಬಯಿಟ್ಟು ಕಲೆಕ್ಷನ್ ಕೂಡ ಮಾಡಬಹುದು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಹೆಜಮಾಡಿಯಲ್ಲಿ‌ ಹೆಚ್ಚುವರಿ ಟೋಲ್ ಸಂಗ್ರಹದ ಶಾಶ್ವತ ವಾಪಾಸಾತಿ ಆದೇಶಕ್ಕೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಉಡುಪಿ ಬನ್ನಂಜೆಯ ತಾಲೂಕು ಕಚೇರಿ ಬಳಿ ಗುರುವಾರ ಹಮ್ಮಿಕೊಂಡ ಸಾಮೂಹಿಕ ಧರಣಿ ಉದ್ದೇಶಿಸಿ ಮಾತನಾಡಿದರು.

ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ಸಂಗ್ರಹಕ್ಕೆ ಶಾಶ್ವತವಾದ ತಡೆ ನೀಡಬೇಕು. ಸುರತ್ಕಲ್ ಮುಕ್ಕಾದಿಂದ ನಂತೂರುವರೆಗಿನ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆಯೆಂದು ಘೋಷಣೆ ಮಾಡಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಮುಂದಾಗಬೇಕು. ಈ ಕೆಲಸವನ್ನು ಮಾಡದೆ, ಬೇರೆ ಬೇರೆ ವಿಧಾನದಲ್ಲಿ ಟೋಲ್ ಸಂಗ್ರಹಕ್ಕೆ ಪ್ರಯತ್ನಿಸಿದರೆ ಹೋರಾಟ ದೊಡ್ಡ ಮಟ್ಟದಲ್ಲಿ ಭು#ಗಿಲೆಳುತ್ತದೆ. ಸುರತ್ಕಲ್ ನಲ್ಲಿ ಮಾಡಿದ ಹೋರಾಟವೂ ಹೆಜಮಾಡಿಯಲ್ಲಿ ಪುನರಾರ್ವತನೆ ಆಗುತ್ತದೆ‌. ಸುರತ್ಕಲ್ ಕ್ಕಿಂತ ಹತ್ತುಪಟ್ಟು ದೊಡ್ಡ ರೀತಿಯ ಹೋರಾಟ ಆಗುತ್ತದೆ. ಟೋಲ್ ರೀತಿಯಲ್ಲಿ ನೀವು ಕೂಡ ಸಮುದ್ರ ಪಾ#ಲಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು. 

Ads on article

Advertise in articles 1

advertising articles 2

Advertise under the article