![ಪಣಂಬೂರು ಬೀಚ್ನಲ್ಲಿ ನೀರುಪಾಲಾದ ಮೂವರು ಯುವಕರು ! ಪಣಂಬೂರು ಬೀಚ್ನಲ್ಲಿ ನೀರುಪಾಲಾದ ಮೂವರು ಯುವಕರು !](https://blogger.googleusercontent.com/img/b/R29vZ2xl/AVvXsEiBq2R_ceAFEXyFM8MEYt3616rSKfIA0HSLnOFm3otFRKKgYKEkGHObWe-bIbu9ijCvbNQpTEvMAWzoYs3dYna0V7d28BBTNppUZneS1QWn6X5WTPsXwCcxY9CgMwW42NI49fxR6lrmPP2RXHYqRkFndt7isuE9x63z4P2LVVjfwB6f2RooXiIgAaLZ1WtB/w640-h360/mang.jpg)
ಪಣಂಬೂರು ಬೀಚ್ನಲ್ಲಿ ನೀರುಪಾಲಾದ ಮೂವರು ಯುವಕರು !
Sunday, March 3, 2024
ಮಂಗಳೂರು: ಮೂವರು ಯುವಕರು ನೀರುಪಾಲಾಗಿರುವಂತಹ ಘಟನೆ ಮಂಗಳೂರು ಹೊರವಲಯದ ಪಣಂಬೂರು ಬೀಚ್ನಲ್ಲಿ ರವಿವಾರ ನಡೆದಿದೆ.
ಮಿಲನ್(20), ಲಿಖಿತ್(18) ಹಾಗು ನಾಗರಾಜ್(24) ಮೃತ ಯುವಕರು. ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಮಿಲನ್, ಕೈಕಂಬದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಲಿಖಿತ್ ಹಾಗು ಕಂಪನಿಯೊಂದರಲ್ಲಿ ಸೂಪರ್ವೈಸರ್ ಆಗಿದ್ದ ನಾಗರಾಜ್ ಪಣಂಬೂರು ಬೀಚ್ನಲ್ಲಿ ಆಟ ಆಡುತ್ತಿದ್ದ ವೇಳೆ ಸಮುದ್ರದ ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದಾರೆ. ಮೀನುಗಾರರು ಹಾಗೂ ಜೀವರಕ್ಷಕ ದಳದಿಂದ ಶೋಧ ಕಾರ್ಯ ನಡೆದಿದೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.