ಗೋಳಿಯಂಗಡಿ ಲಕ್ಷೀ ಬಾ#ರ್ ಆ್ಯಂಡ್ ರೆಸ್ಟೊರೆಂಟ್ನ ಬಾಗಿಲು ಮುರಿದು ನಗದು ಕ#ತನ!
Monday, December 12, 2022
ಹೆಬ್ರಿ(Headlines Kannada): ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಗೋಳಿಯಂಗಡಿ ಲಕ್ಷೀ ಬಾರ್ ಆ್ಯಂಡ್ ರೆಸ್ಟೊರೆಂಟ್ನ ಬಾಗಿಲು ಮುರಿದು ಒಳ#ನು#ಗ್ಗಿದ ಕ#ಳ್ಳರು ಕ್ಯಾಶ್ ಕೌಂಟರ್ ನ ಡ್ರಾವರ್ ನಲ್ಲಿಟ್ಟಿದ್ದ 50 ಸಾವಿರ ರೂ. ನಗದು ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.
ಈ ಬಗ್ಗೆ ಬಾರ್ ಮಾಲೀಕ ಕರುಣಾಕರ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಡಿ.10ರಂದು ರಾತ್ರಿ ಬಾರ್ ನ ಬಾಗಿಲು ಹಾಕಿ ಹೋಗಿದ್ದು, ಡಿ.11ರಂದು ಬೆಳಿಗ್ಗೆ ಬಂದು ನೋಡುವಾಗ ಯಾರೋ ಕ#ಳ್ಳರು ಬಾರ್ನ ಹಿಂಬದಿಯ ಗೋಡೆ ಹಾಗೂ ಕಿಟಕಿಯನ್ನು ಒಡೆದು ಒಳಪ್ರವೇಶಿಸಿ, ಕ್ಯಾಶ್ ಕೌಂಟರ್ ನ ಡ್ರಾವರ್ ನಲ್ಲಿಟ್ಟಿದ್ದ 50 ಸಾವಿರ ರೂ. ನಗದನ್ನು ಕ#ಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.