ಆಂಧ್ರದಲ್ಲಿ TDP ರ್‍ಯಾಲಿ ವೇಳೆ ಕಾ#ಲ್ತುಳಿತ; 8 ಮಂದಿ ಸಾ#ವು-ಹಲವರು ಗಂ#ಭೀರ



ಆಂಧ್ರ ಪ್ರದೇಶ(Headlines Kannada): ಆಂಧ್ರದಲ್ಲಿ TDP ರ್‍ಯಾಲಿ ವೇಳೆ ಕಾಲ್ತುಳಿತ ಉಂಟಾಗಿ 8 ಮಂದಿ ಸಾ#ವನ್ನಪ್ಪಿರುವ  ಘಟನೆ ನೆಲ್ಲೂರು ಕ್ಷೇತ್ರದ ವ್ಯಾಪ್ತಿಯ ಕಂದುಕೂರಿನಲ್ಲಿ ನಡೆದಿದೆ.

ಮಾಜಿ CM ಚಂದ್ರಬಾಬು ನಾಯ್ಡು TDP ಬಹಿರಂಗ ಸಭೆ ಆಯೋಜಿಸಿದ್ದರು. ಈ ವೇಳೆ ವೇದಿಕೆ ಬಳಿ ನೂ#ಕುನುಗ್ಗಲು ಉಂಟಾಗಿದ್ದು, 8 ಮಂದಿ ಮೃ#ತಪಟ್ಟಿದ್ದು, ಹಲವರಿಗೆ ಗಾ#ಯಗಳಾಗಿವೆ. ಗಾ#ಯಳುಗಳನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ 4 ಮಂದಿ ಸ್ಥಿತಿ ಗಂ#ಭೀರವಾಗಿದ್ದು, ಸಾ#ವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಕಾಲ್ತುಳಿತದ ವೇಳೆ   ಟಿಡಿಪಿ ಕಾರ್ಯಕರ್ತರಾದ  ಕೊಂಡಮುಡುಸಿ ಗ್ರಾಮದ ನಿವಾಸಿ ವಾಸು, ಗುಲ್ಲಪಾಳ್ಯಂ ಗ್ರಾಮದ ನಿವಾಸಿ ಪುರುಷೋತ್ತಮ್‌, ಗುಲ್ಲಪಾಳ್ಯಂ ಗ್ರಾಮದ ನಿವಾಸಿ ಮರುಲಪಾಟಿ ಚಿನಕೊಂಡಯ್ಯ, ಆತ್ಮಕೂರು ಗ್ರಾಮದ ನಿವಾಸಿ ದೇವಿನೇನಿ ರವೀಂದ್ರ. ಒರುಗುಸೇನಿ ಪಾಳ್ಯಂ ಗ್ರಾಮದ ನಿವಾಸಿ ಯಾಟಗಿರಿ ವಿಜಯಾ, ಕಂದುಕೂರು ಗ್ರಾಮದ ನಿವಾಸಿ ರಾಜೇಶ್ವರಿ, ಕಲುವಕೂರಿ ಯಾನಾದಿ. ಒರುಗುಸೇನಿ ಪಾಳ್ಯಂ ಗ್ರಾಮದ ನಿವಾಸಿ ಯಾಟಗಿರಿ ವಿಜಯಾ, ಕಂದುಕೂರು ಗ್ರಾಮದ ನಿವಾಸಿ ರಾಜೇಶ್ವರಿ ಎಂಬವರು ಮೃ#ತಪಟ್ಟಿದ್ದಾರೆ.