ದುಬೈನಲ್ಲಿ ಉಡುಪಿ ಪುತ್ತಿಗೆ ಶ್ರೀಗಳಿಗೆ ಭವ್ಯ ಸ್ವಾಗತ: ಡಿ.23ರವರೆಗೆ ದುಬೈ, ಅಬುದಾಭಿಯಲ್ಲಿ ಸಂಚಾರ ನಡೆಸಲಿರುವ ಪುತ್ತಿಗೆ ಶ್ರೀ

ದುಬೈನಲ್ಲಿ ಉಡುಪಿ ಪುತ್ತಿಗೆ ಶ್ರೀಗಳಿಗೆ ಭವ್ಯ ಸ್ವಾಗತ: ಡಿ.23ರವರೆಗೆ ದುಬೈ, ಅಬುದಾಭಿಯಲ್ಲಿ ಸಂಚಾರ ನಡೆಸಲಿರುವ ಪುತ್ತಿಗೆ ಶ್ರೀ

ದುಬೈ (Headlines Kannada): ದುಬೈ ಶ್ರೀ ರಾಘವೇಂದ್ರ ಸೇವಾ ಸಮಿತಿ ಸದಸ್ಯರಿಂದ ಭಾವಿ ಪರ್ಯಾಯ ಉಡುಪಿ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭವ್ಯ ಸ್ವಾಗತದೊಂದಿಗೆ ದುಬೈಗೆ ಬರಮಾಡಿಕೊಳ್ಳಲಾಯಿತು.




ಈ‌ ವೇಳೆ ಸಮಿತಿಯ ‌ಸದಸ್ಯರು ಶ್ರೀಗಳಿಗೆ ಸಾಮೂಹಿಕ ಪಾದಪೂಜೆ, ತೊಟ್ಟಿಲುಪೂಜಾ ಸೇವೆ ನಡೆಸಿ, ಭವ್ಯ ಅಭಿನಂದನಾ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ಮತ್ತು ಅರ್ಚಕ ಶ್ರೀಪತಿ ಉಪಾಧ್ಯಾಯ  ಅವರನ್ನು ಗೌರವಿಸಲಾಯಿತು. 

ದುಬೈಯಲ್ಲಿ ನೂರಾರು ಮಂದಿಯನ್ನು ಭಗವದ್ಗೀತಾ ಪ್ರಚಾರಕ್ಕೆ  ಪ್ರೇರೇಪಿಸಿದ ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಸಂಯೋಜಕ ಹರಿಪ್ರಸಾದ್ ವಂದಿಸಿದರು. ಶ್ರೀಪಾದರು  ದುಬೈ, ಅಬುದಾಭಿಯಲ್ಲಿ ಡಿಸೆಂಬರ್ 23 ರವರೆಗೆ ಸಂಚರಿಸಲಿದ್ದಾರೆ .

Ads on article

Advertise in articles 1

advertising articles 2

Advertise under the article