ಜೀವನದಲ್ಲಿ ಜಿಗುಪ್ಸೆ: ಮಟಪಾಡಿಯಲ್ಲಿ ಮರಕ್ಕೆ ನೇ#ಣುಬಿಗಿದುಕೊಂಡು ವ್ಯಕ್ತಿ ಆ#ತ್ಮ#ಹ#ತ್ಯೆ
Saturday, January 7, 2023
ಬ್ರಹ್ಮಾವರ(Headlines Kannada): ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ಮಾವಿನಮರಕ್ಕೆ ನೇ#ಣುಬಿಗಿದುಕೊಂಡು ಆ#ತ್ಮ#ಹ#ತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದಲ್ಲಿ ಜ.6ರಂದು ಸಂಜೆ 5ಗಂಟೆಗೆ ನಡೆದಿದೆ.
ಮೃ#ತರನ್ನು ಮಟಪಾಡಿ ನಿವಾಸಿ 45ವರ್ಷದ ಅಣ್ಣಪ್ಪ ಪೂಜಾರಿ ಎಂದು ಗುರುತಿಸಲಾಗಿದೆ. ಇವರು ವಿಪರೀತ ಶ#ರಾಬು ಕು#ಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಅದೇ ರೀತಿ ನಿನ್ನೆ ಸಂಜೆ ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೊರಗೆ ಹೋದವರು ಮನೆಯ ಹತ್ತಿರದ ಮಾವಿನ ಮರದ ಕೊಂಬೆಗೆ ನೇ#ಣುಬಿಗಿದುಕೊಂಡು ಆ#ತ್ಮ#ಹ#ತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..