
ಗುಜರಾತಿನ ಗೋಧ್ರೋತ್ತರ ಗ#ಲಭೆಯಲ್ಲಿ 17 ಜನ ಅಲ್ಪಸಂಖ್ಯಾತರ ಹ#ತ್ಯೆ ಪ್ರಕರಣ; 22 ಆರೋಪಿಗಳ ಖುಲಾಸೆಗೊಳಿಸಿದ ಗುಜರಾತ್ನ ನ್ಯಾಯಾಲಯ
ಗೋಧ್ರಾ: ಗುಜರಾತಿನ ದಲ್ವೋಲ್ ಗ್ರಾಮದಲ್ಲಿ ಗೋಧ್ರೋತ್ತರ ಗ#ಲಭೆ ಬಳಿಕ ನಡೆದ 17 ಜನರ ಹ#ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಆರೋಪಿಗಳನ್ನು ಗುಜರಾತ್ನ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
2002ರ ಗೋಧ್ರಾ ಹ#ತ್ಯಾ#ಕಾಂಡದ ನಂತರ ನಡೆದ ಕೋ#ಮುಗಲಭೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ 17 ಮಂದಿಯನ್ನು ಹ#ತ್ಯೆ ಮಾಡಲಾಗಿತ್ತು. ಬಳಿಕ ಸಾಕ್ಷ್ಯಗಳನ್ನು ನಾಶಪಡಿಸಲು ದೇಹಗಳನ್ನು ಸುಡಲಾಗಿತ್ತು.
ಈ ಹತ್ಯೆ ಪ್ರಕರಣದ ವಿಚಾರಣೆ ನಡೆಸಿರುವ ಗುಜರಾತ್ನ ಪಂಚಮಹಲ್ ಜಿಲ್ಲೆಯ ಹಲೋಲ್ ಪಟ್ಟಣದ ನ್ಯಾಯಾಲಯವು, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 22 ಆರೋಪಿಗಳನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ.
ಹಲೋಲ್ ಪಟ್ಟಣದ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ಷ ತ್ರಿವೇದಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಪೈಕಿ 8 ಮಂದಿ ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದರು.
2002ರಲ್ಲಿ ಗೋಧ್ರಾದಲ್ಲಿ ಸಾಬರಮತಿ ಎಕ್ಸ್ಪ್ರೆಸ್ ರೈಲಿಗೆ ಬೆಂ#ಕಿ ಹಚ್ಚಿಲಾಗಿದ್ದು, ಈ ಕೃತ್ಯದಲ್ಲಿ 59 ಮಂದಿ ಸಾ#ವನ್ನಪ್ಪಿದ್ದರು. ರೈಲಿನಲ್ಲಿದ್ದವರ ಪೈಕಿ ಹೆಚ್ಚಿನವರು ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರಾಗಿದ್ದರು. ಈ ಘಟನೆ ಬಳಿಕ ಗುಜರಾತಿನಲ್ಲಿ ವಿವಿಧ ಭಾಗಗಳಲ್ಲಿ ಕೋಮು ಗ#ಲಭೆ ಭುಗಿಲೆದ್ದಿತ್ತು. ಈ ಘಟನೆಯ ಮರುದಿನ ಅಂದರೆ ಮಾರ್ಚ್ 1 ರಂದು ಗೋಧ್ರದ 30 ಕೆ.ಮೀ.ದೂರದ ಕಾಲೊಳ್ ನಗರದ ದಲ್ವೋಲ್ ಗ್ರಾಮದಲ್ಲಿ ಹಲವು ಮನೆಗಳಿಗೆ ಬೆಂ#ಕಿ ಹಚ್ಚಲಾಗಿತ್ತು. ಅದರಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ 17ಮಂದಿಯನ್ನು ಕೊಂ#ದು ಸು#ಟ್ಟು ಹಾಕಲಾಗಿತ್ತು.