ಇತ್ತೀಚೆಗೆ ನಿಧನರಾದ ಗುರುಪುರ ನಾಡುಗುಡ್ಡೆಯ ಕಾಂಗ್ರೆಸ್ ಕಾರ್ಯಕರ್ತನ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಇನಾಯತ್ ಅಲಿ

ಗುರುಪುರ: ಗುರುಪುರದ ನಾಡುಗುಡ್ಡೆಯ ಕಾಂಗ್ರೆಸ್ ಕಾರ್ಯಕರ್ತ ಕೊರಗ ಅವರು ಇತ್ತೀಚೆಗೆ ನಿಧನರಾಗಿದ್ದು, ನಿನ್ನೆ ಅವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದರು.

ಈ‌ ವೇಳೆ ಗುರುಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಬಾಷಾ, ಗ್ರಾಷನ್ ಡಿಸೋಜಾ, ಶೋಭಾ, ಯೋಗಿ, ಸ್ಟೀವನ್, ಮೋಹಿನಿ, ರುಕಾಯರವರು ಸೇರಿದಂತೆ ಇನ್ನಿತರರು ಇದ್ದರು.