![ಶನಿವಾರ ಈದುಲ್ ಫಿತ್ರ್ ಆಚರಣೆ: ಘೋಷಣೆ ಮಾಡಿದ ಉಡುಪಿ, ಉಳ್ಳಾಲ, ಭಟ್ಕಳ ಖಾಝಿ ಶನಿವಾರ ಈದುಲ್ ಫಿತ್ರ್ ಆಚರಣೆ: ಘೋಷಣೆ ಮಾಡಿದ ಉಡುಪಿ, ಉಳ್ಳಾಲ, ಭಟ್ಕಳ ಖಾಝಿ](https://blogger.googleusercontent.com/img/b/R29vZ2xl/AVvXsEhgFXP3YySvbZgKoYWC0YFLavu9Ov6ljp7jTgrWhDezJHp__hFEm8qVI14pvKbet1o81Y3ieRC1hayAc43DnHBcxXyrwENQorr73rbzgXTIOKbO0iCJC6C4B7_OS19mncC_Do0kMVSNim8i9FA_muxui0QclUfyDkr2hDdDEtp96OUQlJNswXy9vaOIOQ/w640-h488/eid.jpg)
ಶನಿವಾರ ಈದುಲ್ ಫಿತ್ರ್ ಆಚರಣೆ: ಘೋಷಣೆ ಮಾಡಿದ ಉಡುಪಿ, ಉಳ್ಳಾಲ, ಭಟ್ಕಳ ಖಾಝಿ
Thursday, April 20, 2023
ಮಂಗಳೂರು(Headlines Kannada): ಗುರುವಾರ ರಾತ್ರಿ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಶನಿವಾರ ಈದುಲ್ ಫಿತ್ರ್ ಆಚರಿಸಲು ನಿರ್ಧರಿಸಲಾಗಿದೆ.
ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಶವ್ವಾಲ್ನ ಪ್ರಥಮ ಚಂದ್ರದರ್ಶನ ಎಲ್ಲೂ ಆಗಿಲ್ಲವಾಗಿರುವುದರಿಂದ ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಶವ್ವಾಲ್ನ ಪ್ರಥಮ ಚಂದ್ರದರ್ಶನ ಆಗಲಿರುವುದರಿಂದ ಪಶ್ಚಿಮ ಕರಾವಳಿ ತೀರದಲ್ಲಿ ಶನಿವಾರ (ಎ.22) ಈದುಲ್ ಫಿತ್ರ್ ಆಚರಿಸಲು ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿ ಅಲ್ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಮತ್ತು ಭಟ್ಕಳ ಖಾಝಿ ಪ್ರತ್ಯೇಕ ಹೇಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ.