ಕಲಬುರಗಿಯ ಹಝರತ್ ಖ್ವಾಜಾ ಬಂದೇ ನವಾಝ್ ದರ್ಗಾಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ರಾಜ್ಯದ ಜನರ ಸುಖ, ಶಾಂತಿ, ಸೌಹಾರ್ದತೆಗಾಗಿ ವಿಶೇಷ ಪ್ರಾರ್ಥನೆ 

ಕಲಬುರಗಿಯ ಅತ್ಯಂತ ಪ್ರಸಿದ್ಧ ಹಝರತ್ ಖ್ವಾಜಾ ಬಂದೇ ನವಾಝ್ ದರ್ಗಾಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯದ ಜನರ ಸುಖ, ಶಾಂತಿ, ಸೌಹಾರ್ದತೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಧರ್ಮಗುರುಗಳ ಆಶೀರ್ವಾದ ಪಡೆದರು. 



ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಜಿ ಪರಮೇಶ್ವರ್‌, ಸಚಿವರಾದ ಪ್ರಿಯಾಂಕ್‌ ಖರ್ಗೆ, ಯು.ಟಿ ಖಾದರ್‌, ಡಾ. ಶರಣಪ್ರಕಾಶ್‌ ಪಾಟೀಲ್‌, ಶಾಸಕರಾದ  ರಹೀಂ ಖಾನ್‌,  ಅಜಯ್‌ ಸಿಂಗ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.