
ಸರಸ್ವತಿ ದೇವರಿಗಿಂತ ಸಾವಿತ್ರಿ ಮಾತೆ ದೊಡ್ಡವರು: ಜಯನ್ ಮಲ್ಪೆ
ಮಲ್ಪೆ(Headlines Kannada): ಹಿಂದೂ ಧರ್ಮದಲ್ಲಿ ವಿಧ್ಯಾದೇವತೆಯೆಂದು ಪೂಜಿಸುವ ಸರಸ್ವತಿ ದೇವರು ದುಡ್ಡಿದ್ದವರಿಗೆ ಮತ್ತು ಮೇಲ್ಜಾತಿಯವರಿಗೆ ವಿಧ್ಯೆ ನೀಡಿದರೆ, ಶೂದ್ರರಿಗೆ, ಮಹಿಳೆಯರಿಗೆ ವಿಧ್ಯಾಭ್ಯಾಸ ನಿರಾಕರಿಸಿದ ಸಮಯದಲ್ಲಿ ಸಾವಿತ್ರಿ ಜ್ಯೋತಿ ಭಾಫುಲೆ ವಿಧ್ಯೆ ನೀಡಿ ದೊಡ್ಡವರೆನಿಸಿದ್ದಾರೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಕಪ್ಪೆಟ್ಟು ಅಂಬೇಡ್ಕರ್ ಭವನದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಏರ್ಪಡಿಸಿದ ಸಾವಿತ್ರಿಜ್ಯೋತಿ ಭಾಫುಲೆಯವರ 193 ನೇ ಜನ್ಮದಿನಾವರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸಮಾಜಿಕ ಅ#ನಿಷ್ಠಗಳ ವಿರುದ್ಧ ನಿರಂತರ ಹೋರಾಟ ನಡೆಸಿ ಅರಿವಿನ ಪ್ರಜ್ಞೆಯನ್ನು ಜಾಗೃತಿಗೊಳಿಸಿದ ಸಾವಿತ್ರಿಬಾಯಿ ಫುಲೆ, ಬಾ#ಲ್ಯವಿವಾಹ, ಸ#ತಿಸಹಗಮನ,ಕೇ#ಶಮುಂಡನೆಯ ವಿರುದ್ಧ ನಿರಂತರ ಹೋರಾಡಿದ ಇವರ ಬದುಕು ಭಾರತೀಯ ಮಹಿಳೆಗೆ ಆದರ್ಶವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ, ಭಾರತದಲ್ಲಿ ಅಕ್ಷರಕ್ರಾಂತಿ ಆರಂಭಿಸಿದ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ, ದಲಿತ ಮತ್ತು ಹಿಂದುಳಿದ ಮಹಿಳೆಯರಿಗೆ ಅಕ್ಷರ ಜ್ಞಾನ ನೀಡಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದವರು ಎಂದರು.
ದಲಿತ ಮುಖಂಡರಾದ ಸಂತೋಷ್ ಕಪ್ಪೆಟ್ಟು ಮಾತನಾಡಿ ಸಾವಿತ್ರಿ ಬಾಯಿಫುಲೆಯವರ ಬದುಕನ್ನು ಅವರ ಸಾಧನೆಯನ್ನು ನಾವು ಗೌರವಿಸದೇ ಹೋದರೆ ಈ ಬದುಕಿಗೆ ಯಾವ ಅರ್ಥನೂ ಇಲ್ಲ.ಸಮಸಮಾಜದ ಕನಸಿನೊಂದಿಗೆ ಮಹಿಳೆಯರ ಹಕ್ಕುಗಳನ್ನು ಕಸಿಕೊಂಡ ಕಾಲದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ತಮ್ಮ ಬದುಕನ್ನೆ ಮೀಸಲಿಟ್ಟ ಸಾವಿತ್ರಿಬಾಯಿ ಮರೆಯಬಾರದ ಮಹಾಮಾತೆ ಎಂದರು.
ವೇದಿಕೆಯಲ್ಲಿ ದಲಿತ ಮುಖಂಡರಾದ ಬಿ.ಎನ್.ಪ್ರಶಾಂತ್, ಮೋಹನ್ದಾಸ್ ಚಿಟ್ಪಾಡಿ, ಗಣೇಶ್ ನೆರ್ಗಿ,ಭಗವಾನ್ ಮಲ್ಪೆ, ಮಂಜುನಾಥ ಕಪ್ಪೆಟ್ಟ ಉಪಸ್ಥಿತರಿದ್ದರು. ಸತೀಶ್ ಕಪ್ಪೆಟ್ಟು ಸ್ವಾಗತಿಸಿ,ಸುಶೀಲ್ ಕುಮಾರ್ ಕೊಡವೂರು ವಂದಿಸಿದರು.ರಾಮೋಜಿ ಅವೀನ್ ಕಾರ್ಯಕ್ರಮ ನಿರೂಪಿಸಿದರು.