ಜೂನ್ 29-30ರಂದು ಉಡುಪಿಯಲ್ಲಿ "ಔರಾ ಚಿತ್ರಕಲಾ ಪ್ರದರ್ಶನ"; ಔರಾ ಆರ್ಟ್ ಕ್ಲಾಸ್ ಆ್ಯಂಡ್ ಗ್ಯಾಲರಿಯ ಮುಖ್ಯ ಶಿಕ್ಷಕ ಶೈಲೇಶ್ ಕೋಟ್ಯಾನ್ ಮಾಹಿತಿ

ಜೂನ್ 29-30ರಂದು ಉಡುಪಿಯಲ್ಲಿ "ಔರಾ ಚಿತ್ರಕಲಾ ಪ್ರದರ್ಶನ"; ಔರಾ ಆರ್ಟ್ ಕ್ಲಾಸ್ ಆ್ಯಂಡ್ ಗ್ಯಾಲರಿಯ ಮುಖ್ಯ ಶಿಕ್ಷಕ ಶೈಲೇಶ್ ಕೋಟ್ಯಾನ್ ಮಾಹಿತಿ

ಉಡುಪಿ: ಔರಾ ಆರ್ಟ್ ಕ್ಲಾಸ್ ಆ್ಯಂಡ್ ಗ್ಯಾಲರಿ ವತಿಯಿಂದ 'ಔರಾ ಚಿತ್ರಕಲಾ ಪ್ರದರ್ಶನ'ವು ಇದೇ ಜೂನ್ 29 ಮತ್ತು 30ರಂದು ಉಡುಪಿಯ ಕುಂಜಿಬೆಟ್ಟುವಿನ ಎ.ವಿ.ಎ. ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕ ಶೈಲೇಶ್ ಕೋಟ್ಯಾನ್ ತಿಳಿಸಿದರು. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜೂನ್ 29ರಂದು ಬೆಳಿಗ್ಗೆ 10ಗಂಟೆಗೆ ಕುಂಜಿಬೆಟ್ಟು ಇಎಂಎಚ್ ಎಸ್ ಸ್ಕೂಲ್ ನ ಮುಖ್ಯೋಪಾಧ್ಯಾಯ ವಿನೋದ ಶೆಟ್ಟಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ‌. ಸಾಮಾಜಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಎರಡು ದಿನಗಳ ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ ಚಿತ್ರಕಲಾ ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ ಎಂದರು. 

ಇಂದಿನ ಡಿಜಿಟಲ್ ಯುಗದಲ್ಲಿ ಕೈಯಿಂದ ನೈಪುಣ್ಯದಿಂದ ಚಿತ್ರಿಸುವ ಪಾರಂಪರಿಕ ಚಿತ್ರಕಲೆ ನಿಧಾನವಾಗಿ ಮರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಚಿತ್ರಕಲೆಯ ನೈಜತೆ ಮತ್ತು ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೈಯಿಂದಲೇ ರಚಿಸಿದ ಮೂಲ ಚಿತ್ರಗಳನ್ನು ಔರಾ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗುತ್ತಿದೆ. ಸಂಸ್ಥೆಯ ಕಲಾವಿದರಾದ ಲಕ್ಷ್ಮೀ ನಾಯಕ್, ಶ್ರೀರಕ್ಷಾ ಕರ್ಕೇರ, ನವೀನ್ ನಾಯಕ್, ರಶ್ಮಿ ಶ್ರೀಕಾಂತ್, ಅಂಬಿಕಾ ಗಣೇಶ್, ಪಲ್ಲವಿ ಶ್ರೀಪತಿ, ಪೂರ್ಣ ಪ್ರಭು, ಪೂರ್ವಿ ಐತಾಳ್ ಮತ್ತು ಶ್ರೀರಕ್ಷಾ ಕೋಟ್ಯಾನ್ ಅವರ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ನವೀನ್ ನಾಯಕ್, ಲಕ್ಷ್ಮೀ ನಾಯಕ್, ಪೂರ್ಣ ಪ್ರಭು, ಪೂರ್ವಿ ಐತಾಳ್, ಅಂಬಿಕಾ ಗಣೇಶ್ ಇದ್ದರು.

Ads on article

Advertise in articles 1

advertising articles 2

Advertise under the article