ಅಬುಧಾಬಿ ಬಿ.ಎ.ಪಿ.ಎಸ್. ಹಿಂದೂ ಮಂದಿರದಲ್ಲಿ ಗುರುವಂದನಾ-ಸಂಸ್ಕೃತಿ ಸಿಂಚನ ಕಾರ್ಯಕ್ರಮ; ಡಾ.ತುಂಬೆ ಮೊಯ್ದೀನ್‌ರಿಗೆ 'ಔಟ್ ಸ್ಟಾಂಡಿಂಗ್ ಎಜುಕೇಟರ್ ಅಚೀವ್ ಮೆಂಟ್ ಅವಾರ್ಡ್' ಪ್ರದಾನ

ಅಬುಧಾಬಿ ಬಿ.ಎ.ಪಿ.ಎಸ್. ಹಿಂದೂ ಮಂದಿರದಲ್ಲಿ ಗುರುವಂದನಾ-ಸಂಸ್ಕೃತಿ ಸಿಂಚನ ಕಾರ್ಯಕ್ರಮ; ಡಾ.ತುಂಬೆ ಮೊಯ್ದೀನ್‌ರಿಗೆ 'ಔಟ್ ಸ್ಟಾಂಡಿಂಗ್ ಎಜುಕೇಟರ್ ಅಚೀವ್ ಮೆಂಟ್ ಅವಾರ್ಡ್' ಪ್ರದಾನ

ಅಬುಧಾಬಿ: ಅಬುಧಾಬಿ ಬಿ.ಎ.ಪಿ.ಎಸ್. ಹಿಂದೂ ದೇವಾಲಯದಲ್ಲಿ ಇತ್ತೀಚೆಗೆ  ಗುರುವಂದನಾ ಮತ್ತು ಸಂಸ್ಕೃತಿ ಸಿಂಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.






ಅಜ್ಮಾನಿನಲ್ಲಿ ತುಂಬೆ ಮೆಡಿಕಲ್ ಯೂನಿವರ್ಸಿಟಿ ಸ್ಥಾಪಿಸಿ ವೈದ್ಯಕೀಯ ಶಿಕ್ಷಣ ಕ್ಷೇತ್ರಲ್ಲಿ ಸಾಧನೆ ಮಾಡಿರುವ ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್‌ರಿಗೆ 'ಔಟ್ ಸ್ಟಾಂಡಿಂಗ್ ಎಜುಕೇಟರ್ ಅಚೀವ್ ಮೆಂಟ್ ಅವಾರ್ಡ್' ನೀಡಿ ಸನ್ಮಾನಿಸಲಾಯಿತು. 

ಇದೇ ವೇಳೆ ಡಾ. ಬಿ. ಆರ್. ಶೆಟ್ಟಿ ಅವರಿಗೆ 'ಸಂಸ್ಕೃತಿ ದಿ ಗೋಲ್ಡನ್ ಹಾರ್ಟ್ ಅವಾರ್ಡ್',  ಕಲಾ ನಿರ್ದೇಶಕ, ಬರಹಗಾರ ಬಿಕೆ ಗಣೇಶ್ ರೈ ಅವರಿಗೆ 'ಸಂಸ್ಕೃತಿ ಶಿಲ್ಪಕಲಾ ರತ್ನ' ಸರ್ವೋತ್ತಮ್ ಶೆಟ್ಟಿ ಅವರಿಗೆ 'ಸಂಸ್ಕೃತಿ ಸೋಶಿಯಲ್ ಎಕ್ಸಲೆನ್ಸ್ ಅವಾರ್ಡ್' ಸದನ್ ದಾಸ್ ಅವರಿಗೆ 'ಸಂಸ್ಕೃತಿ ಸೇವಾ ಪುರಸ್ಕಾರ್ ರತ್ನ' ಸೇರಿದಂತೆ ಹಲವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದಕ್ಕೂ ಮೊದಲು ಭಾರತದ ವಿವಿಧ ಭಾಗಗಳಿಂದ ಆಗಮಿಸಿದ್ದ ಪರಮ ಪೂಜ್ಯ ಮಠಾಧಿಪತಿಗಳು ಹಾಗೂ ಗಣ್ಯಾತಿ ಗಣ್ಯರು, ವಿವಿಧ ಕ್ಷೇತ್ರಗಳ ಸಾಧಕರುಗಳನ್ನು ಸುಮಂಗಲೆಯರಿಂದ ಪೂರ್ಣ ಕುಂಭ, ವೇದಘೋಷ, ಪಂಚವಾಧ್ಯಗಳೊಂದಿಗೆ ಬಿ.ಎ.ಪಿ.ಎಸ್. ಹಿಂದೂ ಮಂದಿರದ ಅವರಣದಲ್ಲಿರುವ ಪ್ರಮುಖ್ ಸಭಾಂಗಣಕ್ಕೆ ಮೆರವಣಿಗೆಯ ಮೂಲಕ ಬರ ಮಾಡಿಕೊಳ್ಳಲಾಯಿತು.

ವೇದಘೋಷದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಪ್ರಾರ್ಥನೆ ಸ್ವಾಗತದೊಂದಿಗೆ ಅಧಿಕೃತ ಚಾಲನೆ ದೊರೆಯಿತು. ಸಂಸ್ಥೆಯಎ ಸದಸ್ಯರು ಪ್ರಾಸ್ತಾವಿಕ ಭಾಷಣದಲ್ಲಿ ಗುರುವಂದನಾ ಮತ್ತು ಸಂಸ್ಕೃತಿ ಸಿಂಚನದ ಸಂಪೂರ್ಣ ಚಿತ್ರಣವನ್ನು ಅನಾವರಣಗೊಳಿಸಿದರು.

ಅಬುಧಾಬಿ ಹಿಂದೂ ಮಂದಿರದ ಮುಖ್ಯಸ್ಥರು ಪರಮ ಪೂಜ್ಯ ಶ್ರೀ ಬ್ರಹ್ಮವಿಹಾರಿ ದಾಸ್ ಸ್ವಾಮೀಜಿಯವರು ಉದ್ಘಾಟನಾ ಭಾಷಣದಲ್ಲಿ ಸನಾತನ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲಿ ಪ್ರಸ್ತುತ ಅಬುಧಾಬಿ ಹಿಂದೂ ಮಂದಿರ ವಿಶ್ವ ಭಾತೃತ್ವದ ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿರುವ ಪ್ರಮುಖ ಕೇಂದ್ರವಾಗಿರುವ ಬಿ ಎ.ಪಿ.ಎಸ್. ಹಿಂದೂ ಮಂದಿರವನ್ನು ಉಲ್ಲೇಖಿಸಿ ಸಂದೇಶವನ್ನು ನೀಡಿದರು.

ಶ್ರೀ ಸಿದ್ದಗಂಗಾ ಮಠಾಧ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಬಿಜಿಎಸ್ ಮಠದ ಜಗದ್ಗುರು ಶ್ರೀ ನಿರ್ಮಲಾನಂದಾ ಮಹಾ ಸ್ವಾಮೀಜಿ ಆಶೀರ್ವಚನ ನೀಡಿ ಗುರುವಂದನೆ ಸಲ್ಲಿಸಿದರು. ಬೆಳಗಾವಿ ನಿಡಸೊಸಿ ಶ್ರೀ ಜಗದ್ಗುರು ದುರುದುಂಡೆಶ್ವರ ಮಠದ ಸ್ವಾಮಿಜಿ  ಶ್ರೀ ನಿಜಲಿಂಗೇಶ್ವರ ಸ್ವಾಮಿಜಿ ಮತ್ತು ಗೋವಾದ ಶ್ರೀ ದತ್ತ ಪದ್ಮನಾಭ ಪೀಠದ ಪದ್ಮಶ್ರೀ ಪುರಸ್ಕೃತ ಪೂಜ್ಯ ಶ್ರೀ ಸದ್ಗುರು ಬ್ರಹ್ಮೇಶನಂದನಾಚಾರ್ಯ ಸ್ವಾಮಿಜಿ, ಹಾಗು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸನಾತನ್ ವೇದಿಕ್ ಸಂಸ್ಥಾನದ ಗುರು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಪ್ರೋಫೆಸರ್ ಸ್ವಾಮಿ ಚೈತನ್ಯಾನಂದ ಸರಸ್ವತಿಯವರಿಂದ ಸಮಾರೋಪ ಸಂದೇಶ ಪ್ರವಚನ ನಡೆಯಿತು. 

Ads on article

Advertise in articles 1

advertising articles 2

Advertise under the article