
ಉಡುಪಿ: ನೂತನ ಎಸ್ಪಿ ಭೇಟಿಯಾದ ಕರವೇ ಮುಖಂಡರು; ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹ
ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಜಿಲ್ಲಾ ಮುಖಂಡರು ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರನ್ನು ಜಿಲ್ಲೆಗೆ ಸ್ವಾಗತಿಸುವ ಮೂಲಕ ಗೌರವಿಸಿದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಯನ್ನು ಬಲಪಡಿಸಿ ಶಾಂತಿ ಕಾಪಾಡುವಂತೆ, ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ವಿನಂತಿಸಲಾಯಿತು.ಈ ಸಂದರ್ಭ ಮಾತನಾಡಿದ ಎಸ್ಪಿ ,ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಕರವೇ ಬೆಂಬಲ ಬೇಕು.ಎಲ್ಲರೂ ಸೇರಿ ಒಟ್ಟಾಗಿ ಜಿಲ್ಲೆಯನ್ನು ಶಾಂತಿಯಿಂದ ಇರಿಸೋಣ.ಜಿಲ್ಲೆಯಲ್ಲಿ ಅಶಾಂತಿ ,ಅಕ್ರಮ ಚಟುವಟಿಕೆಗಳು ನಡೆದಾಗ ನಮ್ಮ ಗಮನಕ್ಕೆ ತನ್ನಿ ಎಂದು ಕರವೇ ಮುಖಂಡರಲ್ಲಿ ವಿನಂತಿಸಿಕೊಂಡರು. ಈ ಸಂದರ್ಭ ಜಿಲ್ಲಾಧ್ಯಕ್ಷ ಅ. ರಾ ಪ್ರಭಾಕರ್ ಪೂಜಾರಿ , ಗೋಪಾಲ್ ಮೆಂಡನ್ ,ಅನಿಲ್ ಪೂಜಾರಿ, ಹೇಮಂತ್ ಕುಮಾರ್ ವಿ , ಕಿರಣ್ ಪಿಂಟೊ , ಪ್ರವೀಣ್ ಡಿಕ್ರೊಜ್ ,ಶಾಬೂದ್ದೀನ್,
ಅಬ್ದುಲ್ ಮಜೀದ್ , ಕೃಷ್ಣ ಪಾಂಗಳ, ಗೀತಾ ಪಾಂಗಳ, ಅಶ್ವಿನಿ, ಜಯಶ್ರೀ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.