
ಸಚಿವ ಈಶ್ವರ ಖಂಡ್ರೆ ಪ್ರಯತ್ನದಿಂದ ಬೆಂಗಳೂರಿಗೆ ಹೊಸ “ಲಾಲ್ಬಾಗ್” ಮಾದರಿಯ ಉದ್ಯಾನವನ; ಶೀಘ್ರ ಶಂಕುಸ್ಥಾಪನೆ
Monday, June 2, 2025
ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರ ನಿರಂತರ ಪ್ರಯತ್ನದಿಂದ ಬೆಂಗಳೂರು ಉತ್ತರದ ಯಲಹಂಕದ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ನೂತನ ಜೈವಿಕ ಉದ್ಯಾನವನ ಸ್ಥಾಪನೆಗೆ ಮೊದಲ ಹೆಜ್ಜೆ ಇಡಲಾಗಿದೆ.
ಈ ಉದ್ಯಾನವನವು ನಗರಕ್ಕೆ ಮತ್ತೊಂದು “ಲಾಲ್ಬಾಗ್” ಮಾದರಿಯ ಶ್ವಾಸತಾಣವಾಗಲಿದ್ದು, ಪರಿಸರ ಸಂರಕ್ಷಣೆ ಮತ್ತು ಹಸಿರು ಪ್ರವಾಸೋದ್ಯಮಕ್ಕೆ ನವ ದಿಕ್ಕು ತೋರಲಿದೆ.
ಭೂಹಸ್ತಾಂತರ ಪ್ರಕ್ರಿಯೆ ಇಂದು ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಈ ಯೋಜನೆಗೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಈಶ್ವರ ಖಂಡ್ರೆ ಅವರು ತಿಳಿಸಿದರು.