ಹಕ್ಕು ಪತ್ರ ನೀಡದಿದ್ದರೆ ಅಹೋ ರಾತ್ರಿ ಧರಣಿ : ಶ್ಯಾಮರಾಜ್ ಬಿರ್ತಿ

ಹಕ್ಕು ಪತ್ರ ನೀಡದಿದ್ದರೆ ಅಹೋ ರಾತ್ರಿ ಧರಣಿ : ಶ್ಯಾಮರಾಜ್ ಬಿರ್ತಿ

ಬ್ರಹ್ಮಾವರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಇಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಹಾಗೂ ಇತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಇದರ ಅಂಗವಾಗಿ ಬ್ರಹ್ಮಾವರ ತಾಲೂಕು ಕಛೇರಿ ಎದುರು ನಡೆದ ಪ್ರತಿಭಟನೆಯನ್ನು ಹಿರಿಯ ದಲಿತ ಮುಖಂಡರಾದ ಅಣ್ಣಪ್ಪ ಕುಕ್ಕುಡೆ ಮತ್ತು ವಾರಂಬಳ್ಳಿ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಎಸ್. ನಾರಾಯಣ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಹೂ ಹಾರ ಹಾಕುವ ಮೂಲಕ ಉಧ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದ.ಸಂ.ಸ.ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಈ ದೇಶದಲ್ಲಿ ಭೂಮಿಯಿಂದ ವಂಚಿತರಾದ ಸಮುದಾಯ ಒಂದಿದ್ದರೆ ಅದು ದಲಿತ ಸಮುದಾಯ.ಬಾಬಾಸಾಹೇಬರು ನಮಗೆ ಶಿಕ್ಷಣ ಸಂಘಟನೆ ಹೋರಾಟ ಎಂಬ ಮೂರು ಧ್ಯೇಯ ವಾಕ್ಯವನ್ನು ನೀಡಿದ್ದಾರೆ ಎಂದರು.

ಈಗಿನ ಕಾಲಘಟ್ಟದಲ್ಲಿ ಭೂಮಿ ಇದ್ದರೆ ಮಾತ್ರ ನಾವು ಅಭಿವೃದ್ಧಿ ಹೊಂದಲು ಸಾಧ್ಯ. ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಡಿಸಿ ಮನ್ನಾ ಭೂಮಿ ಇದ್ದರೂ ಜಿಲ್ಲಾಡಳಿತ ಅದನ್ನು ಭೂರಹಿತರಿಗೆ ಹಂಚುತ್ತಿಲ್ಲಾ , ಹೆಚ್ಚಿನ ಡಿಸಿ ಮನ್ನಾ ಭೂಮಿಯನ್ನು ಮೇಲ್ವರ್ಗದವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅತಿಕ್ರಮಣವಾದ ಡಿಸಿ ಮನ್ನಾ ಭೂಮಿಯನ್ನು ತೆರವುಗೊಳಿಸಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡದ ಭೂರಹಿತರಿಗೆ ಹಂಚಬೇಕು ಎಂದರು.

ಅದೇರೀತಿ ಅಕ್ರಮ ಸಕ್ರಮದಲ್ಲೂ ಸಹ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅರ್ಜಿಗಳನ್ನು ವಿಲೇವಾರಿ ಮಾಡದೇ ಬರಿ ಶ್ರೀಮಂತರ ಮತ್ತು ಮೇಲ್ವರ್ಗದವರಿಗೆ ಜಮೀನು ಮಂಜೂರು ಮಾಡಿದ್ದಾರೆ. ಸರಕಾರಿ ಭೂ ಹಂಚಿಕೆ ಸಮಯದಲ್ಲಿ ಶೇಖಡಾ 50 ರಷ್ಟು ಭೂಮಿಯನ್ನು ನಿಮ್ನ ವರ್ಗದವರಿಗೆ ಕಾಧಿರಿಸಬೇಕೆಂಬ ಕಾನೂನು ಇದ್ದರೂ ಆ ಕಾನೂನನ್ನು ಗಾಳಿಗೆ ತೂರಿ ರಾಜಕಾರಣಿಗಳು ತಮ್ಮ ತಮ್ಮ ಜನಾಂಗದವರಿಗೇ ಮಂಜೂರು ಮಾಡಿದ್ದು ಮಾಹಿತಿ ಹಕ್ಕಿನಲ್ಲಿ ಸಿಕ್ಕಿದೆ ಎಂದು ದೂರಿದರು.

ಆದಷ್ಟು ಬೇಗ ದಲಿತರ ಬೇಡಿಕೆ ಇಡೇರಿಸದೇ ಇದ್ದರೇ ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಹಗಲು ರಾತ್ರಿ ಅನಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದವರು‌ ಎಚ್ಚರಿಸಿದರು.

ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಅವರು ಪ್ರತಿಭಟನಾ ಸ್ಥಳಕ್ಕೇ ಬಂದು ಮನವಿ ಸ್ವೀಕರಿಸಿದರು.

ಬ್ರಹ್ಮಾವರ ತಾಲೂಕು ಕಛೇರಿ ಎಧುರು ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮಸುಂದರ್ ತೆಕ್ಕಟ್ಟೆ , ಕುಮಾರ್ ಕೋಟ , ಮಂಜುನಾಥ ಬಾಳ್ಕುದ್ರು , ತಾಲೂಕು ಸಂಚಾಲಕ ಹರಿಶ್ಚಂದ್ರ ಬಿರ್ತಿ , ಸಂಘಟನಾ ಸಂಚಾಲಕ ಶ್ರೀನಿವಾಸ ವಡ್ಡರ್ಸೆ , ಪ್ರಕಾಶ್ ಹೇರೂರು , ಸುಧಾಕರ ಮಾಸ್ತರ್ ಗುಜ್ಜರ್ ಬೆಟ್ಟು , ಬಿರ್ತಿ ಸುರೇಶ , ಪ್ರಶಾಂತ್ ಬಿರ್ತಿ , ಚೈತನ್ಯ ಬಿರ್ತಿ, ಕುಸುಮಾ ಹಂಗಾರಕಟ್ಟೆ , ಆರೂರು ಸಂಚಾಲಕರಾದ ನರಸಿಂಹ ಆರೂರು , ಶರತ್ ಆರೂರು , ಬೋಜರಾಜ್ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article