ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಸಚಿವ ಸಂತೋಷ್ ಲಾಡ್; ದೇವಸ್ಥಾನದಿಂದ ಸಚಿವರಿಗೆ ಗೌರವ

ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಸಚಿವ ಸಂತೋಷ್ ಲಾಡ್; ದೇವಸ್ಥಾನದಿಂದ ಸಚಿವರಿಗೆ ಗೌರವ

   

ಉಚ್ಚಿಲ: ಇತ್ತೀಚೆಗೆ ಅದ್ದೂರಿಯ ದಸರಾ ಮಹೋತ್ಸವ ನಡೆಸುವ ಮೂಲಕ ದೇಶ-ವಿದೇಶಗಳಲ್ಲಿ ಖ್ಯಾತಿಗೊಂಡಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನಕ್ಕೆ ಶುಕ್ರವಾರ ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಭೇಟಿ ನೀಡಿದರು.







ಈ ವೇಳೆ ಶ್ರೀ ದೇವರ ದರ್ಶನ ಪಡೆದ ಸಂತೋಷ್ ಲಾಡ್ ಅವರನ್ನು ಶ್ರೀ ಕ್ಷೇತ್ರದ ವತಿಯಿಂದ ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಿಸಲಾಯಿತು.

ದ.ಕ.ಮೊಗವೀರ ಮಹಾಜನ ಸಂಘದ ಸದಸ್ಯರಾದ ಕಿರಣ್ ಕುಮಾರ್ ಪಿತ್ರೊಡಿ, ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ, ಲಾವಣ್ಯ ಬಲ್ಲಾಳ್, ಸುರೇಶ್ ಕಾಂಚನ್ ಕೋಟ, ಸೌರಭ್ ಬಳ್ಳಾಲ್, ಶ್ರೀ ಕ್ಷೇತ್ರ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಮುಂತಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article